ಬೆಟ್ಟದಪುರ: ಇಲ್ಲಿಗೆ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ(ಪ್ರಾಥಮಿಕ ವಿಭಾಗ)ಯಲ್ಲಿ ಬುಧವಾರ ಜವಾಹರ್ಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಟೋಟ ಹಾಗೂ ಛದ್ಮವೇಷ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲೆಗೆ ಆಫೀಸ್ ವೀಲ್ ಚೇರ್ಅನ್ನು ಕೊಡುಗೆಯಾಗಿ ನೀಡಿದ ದಾನಿ ಸಿದ್ದರಾಜು ಹೊಸಕೋಟೆ ಅವರನ್ನು ಸನ್ಮ್ಮಾನಿಸಲಾಯಿತು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಕಾವ್ಯಾ ಜನಾರ್ಧನ್, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ತುಂಗಶ್ರೀ, ಪ್ರದೀಪ, ಸಂತೋಷ್ ಪಟೇಲ್, ಪ್ರಸನ್ನ, ಚಂದ್ರಶೇಖರ, ಮುಖಂಡರಾದ ಎಚ್.ಟಿ ಗೋವಿಂದೆಗೌಡ, ನಾರಾಯಣ್, ಕುಮಾರ್, ಸುನೀಲ್, ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ವಿದ್ಯಾಶ್ರೀ, ಚಂದ್ರಶೇಖರ್, ಸಚಿನ್ ರುಕ್ಮಿಣಿ, ಜಬೀನ್ ಬೇಬಿ, ಪ್ರಿಯದರ್ಶಿನಿ, ಯಶೋದಮ್ಮ, ನಾಗರತ್ನಾ ಸೇರಿದಂತೆ ಗ್ರಾಮಸ್ಥರು ಹಾಗೂ ಮಕ್ಕಳು ಇದ್ದರು.