ಬೆಟ್ಟದಪುರ: ಸಮೀಪದ ಹಸುವಿನ ಕಾವಲು ಗ್ರಾಮದಲ್ಲಿ ಸಾಲಬಾಧೆಗೆ ರೈತ ಕ್ರಿಮಿನಾಶಕ ಸೇವಿಸಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ರೈತ ಮಹದೇವ್(58) ಆತ್ಮಹತ್ಯೆ ಮಾಡಿಕೊಂಡ ರೈತ. ಮಹದೇವ್ಗೆ 4 ಎಕರೆ ಜಮೀನಿದ್ದು, ಅದರಲ್ಲಿ ಶುಂಠಿ ಹಾಗೂ ತಂಬಾಕು ಬೆಳೆ ಬೆಳೆಯುತ್ತಿದ್ದರು. ಬೆಳೆಗೆ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಬೈಲಕುಪ್ಪೆ ಶಾಖೆಯಲ್ಲಿ 13 ಲಕ್ಷ ರೂ. ಹಾಗೂ ಪರಿಚಯಿಸ್ಥರಿಂದ 5 ಲಕ್ಷ ರೂ.ಸಾಲ ಪಡೆದಿದ್ದರು. ಎರಡು ವರ್ಷಗಳಿಂದ ಬೆಳೆ ಸರಿಯಾಗಿ ಫಸಲು ನೀಡಿದೆ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ನೇತ್ರಾವತಿ ಬೆಟ್ಟದಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.