ಛತ್ತೀಸ್ಗಢ: ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಟ್ರ್ಯಾಕ್ಟರ್ನಿಂದ ಹೊಲ ಉಳುಮೆ ಮಾಡಿ ಬೀಜಗಳ ಬಿತ್ತನೆ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದೆ.
ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಇಂದು ಅಕ್ತಿ ತಿಹಾರ್ ಮತ್ತು ಮತಿ ಪೂಜನ್ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಟ್ರ್ಯಾಕ್ಟರ್ ಓಡಿಸಿ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಬಿತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ.
ಭೂಪೇಶ್ ಬಾಘೇಲ್ ಭೂಮಿಯನ್ನು ಉಳುಮೆ ಮಾಡುತ್ತಾರೆ, ಅಕ್ಷಯ ತೃತೀಯ ಸಂದರ್ಭದಲ್ಲಿ ಮತಿ ಪೂಜೆ ಮಾಡುತ್ತಾರೆ. ಟ್ರ್ಯಾಕ್ಟರ್ ಸವಾರಿ ಮಾಡಿ ವಿವಿಧ ಥಳಿಯ ಬೀಜಗಳ ಬಿತ್ತನೆ ಮಾಡುತ್ತಾರೆ.
जय जोहार
जय अक्ति तिहार pic.twitter.com/PzftNynL5Z— Bhupesh Baghel (@bhupeshbaghel) April 22, 2023
ಈ ವೇಳೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ದೇವತೆಗಳಿಗೂ ಪ್ರಾರ್ಥನೆ ಸಲ್ಲಿಸಿದರು. “ಆಕ್ತಿ ತಿಹಾರ್ ನಮಗೆ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ದಿನ ರೈತರು ಬೀಜಗಳನ್ನು ಬಿತ್ತುತ್ತಾರೆ ಮತ್ತು ಉತ್ತಮ ಇಳುವರಿಗಾಗಿ ಪ್ರಾರ್ಥಿಸುತ್ತಾರೆ” ಎಂದು ಬಘೇಲ್ ಹೇಳಿದರು.
ಎರಡು ಕಾರುಗಳ ನಡುವೆ ಡಿಕ್ಕಿ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣ