More

    ಕಾಶಿ ಜಗದ್ಗುರುಗಳು ಮಹಾನ್ ಸಂಸ್ಕೃತ ಪಂಡಿತರು; ಚೆನ್ನಮಲ್ಲಿಕಾರ್ಜುನ ಶ್ರೀ

    ರಾಣೆಬೆನ್ನೂರ: ಕಾಶಿ ವಿಶ್ವೇಶ್ವರ ಜಗದ್ಗುರುಗಳು ಮಹಾನ್ ಸಂಸ್ಕೃತ ಪಂಡಿತರಾಗಿದ್ದರು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
    ನಗರದ ಚೆನ್ನೇಶ್ವರ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
    ಕಾಶಿ ಪೀಠವನ್ನು ಬಹಳ ಜವಾಬ್ದಾರಿಯಿಂದ ಮುನ್ನಡೆಸಿದರು. ಲಿಂಗೈಕ್ಯರಾಗುವ ಮುನ್ನವೇ ಇಡೀ ಪೀಠದ ಸಮಸ್ಯೆಯನ್ನು ಬಗೆಹರಿಸಿದರು. ಸಮಸ್ತ ಸಮಾಜಕ್ಕೆ ಕಾಶಿಪೀಠದ ಸೇವೆ ಅನುಪಮವಾಗಿದೆ ಎಂದರು.
    ಶ್ರೀ ಕಾಶಿ ವಿಶ್ವೇಶ್ವರ ಜಗದ್ಗುರುಗಳ ಕುರಿತು ನಿವೃತ್ತ ಶಿಕ್ಷಕ ಅಮೃತಗೌಡ ಹಿರೇಮಠ ವಿಶೇಷ ಉಪನ್ಯಾಸ ನೀಡಿದರು.
    ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಚ್. ಪಾಟೀಲ ಹಾಗೂ ಬಾಲಾಜಿ ಪೆಂಡಾಲ್ ಮಾಲೀಕ ಪುರುಷೋತ್ತಮ ಅವರನ್ನು ಸನ್ಮಾನಿಸಲಾಯಿತು.
    ಪ್ರಮುಖರಾದ ಟಿ. ವೀರಣ್ಣ, ಆರ್.ಎಸ್. ಆರಾಧ್ಯಮಠ, ದೇವೇಂದ್ರಪ್ಪ ಬೇಲೂರ, ಬಿದ್ದಾಡಪ್ಪ ಚಕ್ರಸಾಲಿ, ವಿ.ಎಂ. ಕರ್ಜಗಿ, ಜ್ಯೋತಿ ಬಣ್ಣದ, ಚನ್ನವೀರಗೌಡ ಪಾಟೀಲ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ಗೌರಿಶಂಕರಸ್ವಾಮಿ ನೆಗಳೂರುಮಠ, ಶರಣಯ್ಯ ಅರತ್ತಿಮಠ, ಎಂ.ಕೆ. ಹಾಲಸಿದ್ದಯ್ಯಶಾಸ್ತ್ರಿ, ಗಾಯತ್ರಿ ಕುರುವತ್ತಿ, ಭಾಗ್ಯಶ್ರೀ ಗುಂಡಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts