More

    ಸ್ವಾವಲಂಬಿ ಭಾರತಕ್ಕೆ ಮಹತ್ಸಾಧನೆ; ದಾಖಲೆ ಅವಧಿಯಲ್ಲಿ ಸಾಗರದಾಳದಲ್ಲಿ ಇಂಟರ್​ನೆಟ್​ ಕೇಬಲ್​ ಅಳವಡಿಸಿದ ಬಿಎಸ್ಸೆನೆಲ್​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಆಗಸ್ಟ್​ 10) ಚೆನ್ನೈ- ಅಂಡಮಾನ್​ ಮತ್ತು ನಿಕೋಬಾರ್​ ನಡುವಿನ ಸಮುದ್ರದಾಳದ ಇಂಟರ್​ನೆಟ್​ ಕೇಬಲ್​ ಯೋಜನೆಯನ್ನು ಉದ್ಘಾಟಿಸಿದರು. ಇದು ಸ್ವಾವಲಂಬಿ ಭಾರತಕ್ಕೆ ಮಹತ್ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.

    ಭಾರತದ ಪ್ರಪ್ರಥಮ ಸಾಗರದಾಳದ ಇಂಟರ್​ನೆಟ್​ ಕೇಬಲ್​ ಯೋಜನೆಯಾಗಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೆ ಹೈಸ್ಪೀಡ್​ ಇಂಟರ್​ನೆಟ್​ ಸೌಲಭ್ಯ ಹಾಗೂ ಇತರ ಅನುಕೂಲಗಳನ್ನು ಒದಗಿಸಲಿದೆ.

    ಇದನ್ನೂ ಓದಿ; ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…! 

    ಒಟ್ಟು 1,224 ಕೋಟಿ ರೂ.ಗಳ ವೆಚ್ಚದ 2,313 ಕಿ.ಮೀ ದೂರದ ಆಪ್ಟಿಕಲ್​ ಫೈಬರ್​ ಕೇಬಲ್​ ಅಳವಡಿಕೆ ಯೋಜನೆಗೆ ಮೋದಿ 2018ರ ಡಿಸೆಂಬರ್​ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಇದು ಚೆನ್ನೈಯಿಂದ ಪೋರ್ಟ್​ಬ್ಲೇರ್​, ಪೋರ್ಟ್​ಬ್ಲೇರ್​ನಿಂದ ಲಿಟಲ್​ ಅಂಡಮಾನ್​ ಹಾಗೂ ಅಲ್ಲಿಂದ ಸ್ವರಾಜ್​ ದ್ವೀಪ್​ಗೆ ಇಂದಿನಿಂದಲೇ ಸಂಪರ್ಕ ಕಲ್ಪಿಸಲಿದೆ.

    ಆನ್​ಲೈನ್​ ತರಗತಿಗಳು, ಪ್ರವಾಸೋದ್ಯಮ, ಬ್ಯಾಂಕಿಂಗ್​, ಶಾಪಿಂಗ್​ ಅಥವಾ ಟೆಲಿಮೆಡಿಸಿನ್​ ಕ್ಷೇತ್ರವೇ ಇರಲಿ… ಎಲ್ಲದ್ದಕ್ಕೂ ಅನುಕೂಲವಾಗಲಿದೆ. ಇದರಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಸಂಪರ್ಕ, ಸಂವಹನ ಸಾಧ್ಯವಾಗಲಿದೆ.

    ಇದನ್ನೂ ಓದಿ; ಶ್ರೀಲಂಕಾದಲ್ಲಿ ಪೂರ್ಣಪ್ರಮಾಣದಲ್ಲಿ ಶುರುವಾಗಿವೆ ಶಾಲೆಗಳು; ನಿಯಮಗಳು ಹೀಗಿವೆ…. 

    ಅಂಡ್​ಮಾನ್​ ನಿಕೋಬಾರ್​ನ ಏಳು ದ್ವೀಪಗಳಿಗೆ ಇದರಿಂದ ಸಂವಹನ ಸಾಧ್ಯವಾಗಲಿದೆ. ಪೋರ್ಟ್​ಬ್ಲೇರ್​ನಲ್ಲಿ 400 ಜಿಬಿ ಹಾಗೂ ಇತರ ದ್ವೀಪಗಳಲ್ಲಿ 200 ಜಿಬಿ ಸ್ಪೀಡ್​ನ ಇಂಟರ್​ನೆಟ್​ ಸೌಲಭ್ಯ ದೊರೆಯಲಿದೆ. ಸಾಗರದಾಳದಲ್ಲಿ ಕೇಬಲ್​ ಹಾಕುವ ಕೆಲಸವನ್ನು ಬಿಎಸ್​ಎನ್​ಎಲ್​ ಕಂಪನಿ 24 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದೆ.

    ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts