More

    ಕರಡಿ ದಾಳಿ, ವ್ಯಕ್ತಿಗೆ ಗಾಯ

    ಚನ್ನಗಿರಿ: ತಾಲೂಕಿನ ಹನುಮಂತನಗರ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ಕರಡಿ ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಅದೇ ಗ್ರಾಮದ ಹರೋನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜಪ್ಪ ಗಾಯಗೊಂಡವರು. ದನ ಕಾಯಲು ಹೋಗಿದ್ದ ಸಂದರ್ಭದಲ್ಲಿ ಕರಡಿಯು ಹಿಂದಿನಿಂದ ದಾಳಿ ನಡೆಸಿದ್ದು, ಮುಖ, ಮೈ, ಕೈಗೆ ಗಾಯಗಳಾಗಿವೆ.

    ಗಾಯಗೊಂಡ ಮಂಜಪ್ಪ ಅವರನ್ನು ಅಲ್ಲಿಯೇ ಇದ್ದ ಇತರರು ಚನ್ನಗಿರಿ ಆಸ್ಪತ್ರೆಗೆ ಕರೆತಂದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಯಿತು.

    ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬರದೇ ಇದ್ದುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಘಟನೆಯ ಕುರಿತು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಮಾವಿನಹೊಳೆಯಪ್ಪ ಪ್ರತಿಕ್ರಿಯಿಸಿ, ಗಾಯಾಳುವಿಗೆ ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts