More

    ಚಳ್ಳಕೆರೆಯಲ್ಲಿ ಮಳೆಗೆ ಬೆಳೆ, ಮನೆಗೆ ಹಾನಿ

    ಚಳ್ಳಕೆರೆ: ತಾಲೂಕಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ, ಶನಿವಾರ ರಾತ್ರಿ ಸುರಿದ ಮಳಿಗೆ ಬೆಳೆ ಮತ್ತು ಮನೆಗಳ ಛಾವಣಿಗೆ ಹಾನಿಯಾಗಿದೆ.

    ಚಿಕ್ಕೇನಹಳ್ಳಿ ಗ್ರಾಮದ ಶಾರದಮ್ಮ ಎಂಬುವರು ಸಿಡಿಲು ಬಡಿದು ಅಸ್ವಸ್ಥರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

    ಕಾಲುವೇಹಳ್ಳಿ ಗ್ರಾಮದ ಜಿ.ಟಿ.ನಾಗರಾಜ ಅವರ 2 ಎಕರೆ ಮೆಕ್ಕೆಜೋಳ, ಯಾದಲಗಟ್ಟೆ ಗ್ರಾಮದ ಮುಮ್ತಾಜ್ ಫಾತೀಮಾ ಅವರ ವಾಸದ ಮನೆ, ಕ್ಯಾತಗೊಂಡನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ, ಕರಿಯಣ್ಣ ಜಮೀನುಗಳಲ್ಲಿ ತೆಂಗಿನ ಮರಗಳು ಹಾನಿಗೀಡಾಗಿವೆ ಎಂದು ತಿಳಿಸಿದ್ದಾರೆ.

    ಮಳೆಯ ಪ್ರಮಾಣ: ನನ್ನಿವಾಳ ಭಾಗದಲ್ಲಿ 51 ಮಿ.ಮೀ, ಸಾಣೀಕೆರೆ 12, ಹಿರೇಹಳ್ಳಿ 1, ಘಟಪರ್ತಿ 2, ಚೌಳೂರು 7, ದೊಡ್ಡ ಉಳ್ಳಾರ್ತಿ 63, ಮಹಾದೇವಪುರ 8 ಮಿ.ಮೀ. ಮಳೆ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts