More

    ಗುಣಮಟ್ಟದ ಕಾಮಗಾರಿಗೆ ಮನವಿ

    ಚಳ್ಳಕೆರೆ: ಇಲ್ಲಿನ ಅಂಬೇಡ್ಕರ್ ಮತ್ತು ಗಾಂಧಿನಗರ ಸೇರಿ ವಿವಿಧ ಕೊಳೆಗೇರಿಗಳಲ್ಲಿ ನಿರ್ಮಿಸುತ್ತಿರುವ ವಸತಿ ನಿಲಯ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮಂಗಳವಾರ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದರು.

    ಎಸ್ಸಿ-ಎಸ್ಟಿ ಸಮುದಾಯಗಳಿಂದ 50 ಸಾವಿರ ರೂ. ಕಟ್ಟಿಸಿಕೊಂಡು ಮನೆ ನಿರ್ಮಿಸಲಾಗುತ್ತಿದೆ. ಆದರೆ ಭದ್ರತೆ ಬಗ್ಗೆ ಗಮನ ಹರಿಸಿಲ್ಲ. ಫಲಾನುಭವಿಗಳೇ ಪಾಯ ತೋಡಿಸಿ ನೆಲಮಟ್ಟದ ತನಕ ಕಟ್ಟಡ ಮಾಡಿಕೊಳ್ಳಬೇಕಾಗಿದೆ. ಸ್ಲಂಬೋರ್ಡ್ ನಿಯೋಜನೆ ಮಾಡಿರುವ ಕಂಪನಿಯವರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಮನೆಗೆ ಅಗತ್ಯ ಸಿಮೆಂಟ್ ಬಳಕೆ ಆಗಬೇಕು ಎಂದು ಒತ್ತಾಯಿಸಿದರು.

    ಫಲಾನುಭವಿಗಳಾದ ಎನ್.ತಿಪ್ಪೇರುದ್ರಪ್ಪ, ಆರ್. ಬಸವರಾಜ, ಎಂ. ಇಂದ್ರೇಶ್, ಎನ್. ಶಿವಮೂರ್ತಿ, ಬಿ.ಒ.ತಿರುಮಲೇಶ, ಆರ್. ಸತೀಶ್‌ಕುಮಾರ್, ಆರ್. ತಿಪ್ಪೇಸ್ವಾಮಿ, ಡಿ. ಜಯರಾಮ, ಬಸವರಾಜಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts