More

    ಛಲ ಇದ್ದಲ್ಲಿ ಮಾತ್ರ ಯಶಸ್ಸು

    ಸಿದ್ದಾಪುರ: ಸಾಧಿಸುವ ಛಲ ಇದ್ದರೆ ಮಾತ್ರ ಉನ್ನತ ಹುದ್ದೆಗಳಿಗೆ ಏರಲು ಸಾಧ್ಯ. ಯುವ ಜನತೆ ಶಿಕ್ಷಣದಿಂದ ವಂಚಿತರಾಗದೆ ಭವಿಷ್ಯ ರೂಪಿಸಿಕೊಳ್ಳಲು ಗಮನಹರಿಸಬೇಕು ಎಂದು ಎಸ್ಪಿ ಪಿ.ಕೆ. ರಾಮರಾಜನ್ ಸಲಹೆ ನೀಡಿದರು.

    ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಾಡಿ ನಿವಾಸಿಗಳ ಆಶ್ರಯದಲ್ಲಿ ಫೆ.4,5ರಂದು ನಡೆದ ದಿಡ್ಡಳ್ಳಿ ಸಿ.ಬಿ. ಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕೆಂದರೆ ಪಾಲಕರ ಸಹಕಾರ ಅಗತ್ಯವಾಗಿದೆ. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಯುವ ಸಮೂಹ ದುಶ್ಚಟಗಳಿಂದ ದೂರ ಉಳಿದು ಉತ್ತಮ ಸಮಾಜ ಕಟ್ಟಲು ಅಣಿಯಾಗಬೇಕು ಎಂದು ಕರೆ ನೀಡಿದರು. ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿದ ಎಸ್ಪಿ ರಾಮರಾಜನ್ ಕಲಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ಬೇವಿನ ಮರದ ಅಡಿ ಕುಳಿತು ಕಲಿತದ್ದನ್ನು ನೆನಪಿಸಿಕೊಂಡರು. ಶಿಕ್ಷಣದಿಂದ ಮಾತ್ರ ಬಡತನ ಮೆಟ್ಟಿ ಮುನ್ನೆಲೆಗೆ ಬರಲು ಸಾಧ್ಯ ಎಂದರು.

    ದಿಡ್ಡಳ್ಳಿ ಹಾಡಿ ನಿವಾಸಿಗಳು ಎಸ್ಪಿ ಅವರನ್ನು ಮಂಗಳವಾದ್ಯದೊಂದಿಗೆ ಬರಮಾಡಿಕೊಂಡರು.

    ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್, ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಗ್ರಾ.ಪಂ. ಸದಸ್ಯ ಜೆ.ಕೆ ಅಪ್ಪಾಜಿ, ಲಿಂಗಮ್ಮ, ಮಾಜಿ ಸದಸ್ಯೆ ಇಂದಿರಾ, ಮಾಜಿ ತಾ.ಪಂ. ಸದಸ್ಯ ಜೆ.ಕೆ ರಾಮು, ಮುತ್ತಮ್ಮ, ಶಿಕ್ಷಕ ಸಿದ್ದಲಿಂಗ ಶೆಟ್ಟಿ, ವೆಂಕಟಮೂರ್ತಿ, ಪವಿತ್ರಾ, ಲೋಹಿತ್, ಸಿಂಧು, ಪೂರ್ಣಿಮಾ, ವಿದ್ಯಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts