More

    ಸಂವಿಧಾನ ಜಾಗೃತಿ ರಥಯಾತ್ರೆ ಹಬ್ಬದಂತೆ ಆಚರಿಸಿ

    ಮೂಗೂರು: ಫೆ.12 ರಂದು ಗ್ರಾಮಕ್ಕೆ ಆಗಮಿಸುವ ಸಂವಿಧಾನ ಜಾಗೃತಿ ರಥ ಯಾತ್ರೆಗೆ ಅದ್ದೂರಿ ಸ್ವಾಗತ ನೀಡುವುದರ ಮೂಲಕ ಹಬ್ಬದ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಆರ್.ಸುಂದರ್ ತಿಳಿಸಿದರು.

    ಮೂಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮದ ಮುಖಂಡರ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮಕ್ಕೂ ಮುನ್ನವೇ ಗ್ರಾಮದ ಎಲ್ಲ ಸಮುದಾಯದ ಮುಖಂಡರಿಗೂ ಆಹ್ವಾನ ನೀಡಬೇಕು. ಜತೆಗೆ ಸರ್ಕಾರದ ಆದೇಶದಂತೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಆಡಳಿತ ವರ್ಗಕ್ಕೆ ಸಲಹೆ ನೀಡಿದರು.

    ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಪ್ರಕಾಶ್ ಮಾತನಾಡಿ, ಗ್ರಾಮದ ಪೊಲೀಸ್ ಠಾಣೆಯ ಬಳಿ ಕಳಸ ಹೊತ್ತ ಶಾಲಾ ಮಕ್ಕಳು, ಗ್ರಾಮಸ್ಥರು ಸೇರಿದಂತೆ ಜಾಗೃತಿ ರಥ ಯಾತ್ರೆಗೆ ಚಾಲನೆ ನೀಡಿ, ವಾದ್ಯ ಗೋಷ್ಠಿಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಥಾ ನಡೆಸಿದ ನಂತರ ವೇದಿಕೆ ಕಾರ್ಯಕ್ರಮಕ್ಕೆ ತೆರಳಲಾಗುವುದು. ನಂತರ ಬಸ್ ನಿಲ್ದಾಣದ ಬಳಿ ಜಾಗೃತಿ ರಥ ಯಾತ್ರೆಗೆ ಗ್ರಾಮಸ್ಥರು ಬೀಳ್ಕೊಡುಗೆ ನೀಡಲಿದ್ದಾರೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಪಿಡಿಒ ಪ್ರಕಾಶ್, ಕಾರ್ಯದರ್ಶಿ ದೀಪಾ, ಎಂ.ಎಂ.ಜಗದೀಶ್, ಸಿದ್ದರಾಜು, ದಿಲೀಪ, ಕೃಷ್ಣ ಸ್ವಾಮಿ, ಶಶಿಕುಮಾರ್, ಪುಟ್ಟಮಾದಯ್ಯ, ಮಹಾದೇವಸ್ವಾಮಿ, ರಘು, ರಮೇಶ್ ನಾಯ್ಕ, ಗ್ರಾಮಸ್ಥರು, ಪಂಚಾಯಿತಿ ಸದಸ್ಯರು, ಸಿಬ್ಬಂದಿ ವರ್ಗ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts