More

    ಮತ್ತೆ ಮೂರು ವಿಮಾನ ನಿಲ್ದಾಣಗಳು ಅದಾನಿ ಕಂಪನಿ ತೆಕ್ಕೆಗೆ; ಕೇಂದ್ರ ಸಂಪುಟದಿಂದ ಸಹಮತಿ

    ನವದೆಹಲಿ: ಖಾಸಗಿ ಕ್ಷೇತ್ರಕ್ಕೆ ಹೆಚ್ಚು ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಬುಧವಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿರುವ ತಿರುವನಂತಪುರ, ಜೈಪುರ ಹಾಗೂ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಇನ್ನು ಮುಂದೆ ಖಾಸಗಿ ಸಹಭಾಗಿತ್ವದೊಂದಿಗೆ ಮಾಡಲು ನಿರ್ಧರಿಸಿದೆ.

    ಇದು ಶಾಶ್ವತ ಕ್ರಮವೇನು ಅಲ್ಲ, 50 ವರ್ಷಗಳ ಅವಧಿಗೆ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಿದೆ. ಇದರಿಂದ ದೊರೆಯುವ ಮೊತ್ತವನ್ನು ದೇಶದ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಹೇಳಿದ್ದಾರೆ.

    ಇದನ್ನೂ ಓದಿ; ಆರು ತಿಂಗಳಲ್ಲಿ ನಾಲ್ಕು ಕೊಲೆಗೈದ ಶಾರ್ಪ್​ಶೂಟರ್​; ಈತನ ಪ್ಲಾನ್​ ಯಶಸ್ವಿಯಾಗಿದ್ದರೆ ಇರುತ್ತಿರಲಿಲ್ಲ ಸಲ್ಮಾನ್​ ಖಾನ್​…! 

    ಒಂದು ವರ್ಷದ ಹಿಂದಷ್ಟೇ ಮಂಗಳೂರು, ಅಹ್ಮದಾಬಾದ್​, ಲಖನೌ ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹಕ್ಕೆ ವಹಿಸಿಕೊಡಲಾಗಿತ್ತು. ಇದೀಗ ಮತ್ತೆ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆ ಅದಾನಿ ಸಮೂಹಕ್ಕೆ ಸಿಕ್ಕಂತಾಗಿದೆ. ಇದಕ್ಕೂ ಮುನ್ನ ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಜಿಎಂಆರ್​ ಹಾಗೂ ಜಿವಿಕೆ ಕಂಪನಿಗೆ ನೀಡಲಾಗಿತ್ತು. ಅಲ್ಲಿಗೆ ದೇಶದ ಬಹುತೇಕ ಪ್ರಮುಖ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡಿದಂತಾಗಲಿದೆ.

    ಇದನ್ನೂ ಓದಿ; ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ 

    ಈ ಹಿಂದೆ ಆದಾಯ ಹಂಚಿಕೆ ಸೂತ್ರವನ್ನು ಅನುಸರಿಸಲಾಗಿತ್ತು. ಆದರೆ, ಈ ಬಾರಿ ಪ್ರತಿ ಪ್ರಯಾಣಿಕನಿಗೆ ವಿಧಿಸಲಾಗುವ ಶುಲ್ಕ ವಿಧಾನ ಅನುಸರಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಸರ್ಕಾರಕ್ಕೆ ದೊರೆಯುವ ಆದಾಯವೂ ಹೆಚ್ಚಾಗಲಿದೆ. ವಿಮಾನ ನಿಲ್ದಾಣದ ಎಲ್ಲ ಆಸ್ತಿಗಳ ನಿರ್ವಹಣೆ, ಅಭಿವೃದ್ಧಿ, ವಿನ್ಯಾಸ ಮೊದಲಾದವುಗಳು ಸಂಸ್ಥೆಯ ಹೊಣೆಯಾಗಿರಲಿದೆ.

    ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts