ಬೆಂಗಳೂರು: ಮೈಸೂರಿನಲ್ಲಾದ ಗ್ಯಾಂಗ್ರೇಪ್ ಪ್ರಕರಣದ ಬಗ್ಗೆ ಇಂದು ಸದನದಲ್ಲಿ ಶಾಸಕರು ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ, ರಾಜಧಾನಿ ಬೆಂಗಳೂರಿನಲ್ಲೇ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ವರದಿ ಬಂದಿದೆ. ನಗರದ ಮುರುಗೇಶ್ ಪಾಳ್ಯದ ಬಳಿ ನಡೆದಿರುವ ಕೃತ್ಯದ ಸಂತ್ರಸ್ತೆಯು ಉತ್ತರ ಭಾರತ ಮೂಲದವಳು ಎನ್ನಲಾಗಿದೆ.
ನಿನ್ನೆ ರಾತ್ರಿ 2 ಗಂಟೆಯ ಸುಮಾರಿಗೆ ಯುವತಿಯೊಬ್ಬಳು, ಹೆಚ್.ಎಸ್.ಆರ್.ಲೇಔಟ್ನಿಂದ ಮುರುಗೇಶಪಾಳ್ಯಕ್ಕೆ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಹತ್ತಿ ಹೋದ ಯುವತಿಯ ಮೇಲೆ ಕ್ಯಾಬ್ ಚಾಲಕ ಡ್ರಾಪ್ ಲೊಕೇಷನ್ನಿನಲ್ಲಿ ಲೈಂಗಿಕ ಅತ್ಯಾಚಾರ ಎಸಗಿದ ಎನ್ನಲಾಗಿದೆ. ಈ ಕೃತ್ಯವು ಜೀವನ್ ಬೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.