ಚಾಮರಾಜನಗರ: ನೋಟುಗಳಲ್ಲಿನ ಗಾಂಧೀಜಿ ಭಾವಚಿತ್ರ ತೆಗೆಯಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನವನ್ನು ಮೂಲೆಗುಂಪು ಮಾಡಲು ಹೊರಟಿದೆ ಎಂದು ಹೇಳಿದರು.
ಮುಸ್ಲಿಮರು ಈ ದೇಶದ ಮಣ್ಣಿನ ಮಕ್ಕಳು. ಅವರನ್ನು ಹೊರಗೆ ಹಾಕುವುದು ಸಿಎಎ ಮತ್ತು ಎನ್ಆರ್ಸಿ ಉದ್ದೇಶ. ಪೌರತ್ವ ಕಾಯ್ದೆ ಕರಾಳವಾಗಿದ್ದು, ಅದು ಬೇಡವೇ ಬೇಡ ಎಂದು ಹೇಳಿದರು.