ಬೆಂಗಳೂರು: ಚನ್ನಪಟ್ಟಣದ 22 ದೇವಸ್ಥಾನಗಳ ಬಳಿ ಯಾತ್ರಿನಿವಾಸ ನಿರ್ಮಾಣಕ್ಕೆ ಆದೇಶ ಮಾಡುವ ಮೂಲಕ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಸ್ವಕ್ಷೇತ್ರ ಪ್ರೇಮ ಮೆರೆದಿದ್ದಾರೆ.
ತಲಾ 25 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 5 ಕೋಟಿ 50 ಲಕ್ಷ ರೂ. ವೆಚ್ಚಕ್ಕೆ ಯಾತ್ರಿನಿವಾಸ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯಿಂದ ಯೋಗೇಶ್ವರ್ ಅನುಮೋದನೆ ನೀಡಿದ್ದಾರೆ. ಕೇವಲ ಒಂದೇ ತಾಲ್ಲೂಕಿನಲ್ಲಿ 25 ಯಾತ್ರಿನಿವಾಸಕ್ಕೆ ಅನುಮೋದನೆ ನೀಡಿರುವುದು ಹಲವರ ಹುಬ್ಬೇರಿಸಿದೆ.