More

    ಗಾರ್ಮೆಂಟ್ಸ್ ನೌಕರರು ಹೋಗುತ್ತಿದ್ದ ಬಸ್ ನಾಲೆಗೆ ಬಿದ್ದು 15 ಜನರಿಗೆ ಗಾಯ

    ಮಂಡ್ಯ: ತಾಲೂಕಿನ ಡಣಾಯಕನಪುರ ಗ್ರಾಮದ ಬಳಿ ಶುಕ್ರವಾರ ಗಾರ್ಮೆಂಟ್ಸ್ ಮಹಿಳಾ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ನಾಲೆಗೆ ಉರುಳಿ 15 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಚಾಲಕನ ಸ್ಥಿತಿ ಗಂಭೀರವಾಗಿದೆ.
    ಕೆರಗೋಡು ಗ್ರಾಮದ ಚಾಲಕ ರಘುಕುಮಾರ್(27) ಮತ್ತು ತಾಲೂಕಿನ ವಿವಿಧ ಗ್ರಾಮಗಳ ರೂಪಶ್ರೀ(35), ಶೋಭಾ(35), ಶ್ರುತಿ(25), ಲಕ್ಷ್ಮೀ(25), ದೀಪಾ(29),  ವೀಣಾ(26), ಚಂದ್ರಕಲಾ(38), ಪವಿತ್ರಾ(41), ಇಂದ್ರಮ್ಮ(34), ಉಷಾರಾಣಿ(30), ಸರಿತಾ(35), ಮಂಜುಳಾ(34), ಗಾಯತ್ರಿ(32) ಮತ್ತು ದಿವ್ಯಾ(39) ಗಾಯಗೊಂಡಿದ್ದಾರೆ.
    ಗಾರ್ಮೆಂಟ್ಸ್ ನೌಕರರನ್ನು ಮದ್ದೂರಿನಿಂದ ಶಿವಾರ ಮಾರ್ಗದ ಮೂಲಕ ಕರೆದುಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆ ಬದಿ‌ ನಾಲೆ ಬಿದ್ದಿದೆ. ಪರಿಣಾಮ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts