ತಾಳಗುಪ್ಪ: ಹೋಬಳಿಯಲ್ಲಿ ನಾಲ್ಕು ಹೊಸ ಬಿಎಸ್ಎನ್ಎಲ್ ಟವರ್ಗಳು ಈ ವರ್ಷಾಂತ್ಯದೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಲೋಕಸಭಾ ಬಿ.ವೈ.ರಾಘವೇಂದ್ರ ಹೇಳಿದರು.
‘ವಿಜಯವಾಣಿ’ ಜತೆ ಮಾತನಾಡಿ, ತಾಳಗುಪ್ಪ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲು 19 ಕೋಟಿ ರೂ. ಅನುದಾನ ಮಂಜೂರಾಗಿದೆ. ಅದೇ ರೀತಿ ಸಾಗರ, ಶಿವಮೊಗ್ಗ ಹಾಗೂ ಭದ್ರಾವತಿ ರೈಲು ನಿಲ್ದಾಣಗಳ ಮೇಲ್ದರ್ಜೆಗೆ 100 ಕೋಟಿ ರೂ. ಮಂಜೂರಾಗಿದೆ. ತಾಳಗುಪ್ಪ-ಹುಬ್ಬಳ್ಳಿ ರೈಲ್ವೇ ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ತಾಳಗುಪ್ಪ ಮಧ್ಯೆ ಹಾದು ಹೋಗಿದ್ದು ಕೃಷಿಕರ ಭೂಮಿಗೆ ಹೆಚ್ಚು ಹಾನಿಯಾಗದಂತೆ ಬೈಪಾಸ್ ನಿರ್ಮಿಸಲಾಗುವುದು. ಭೂಮಿ ಕಳೆದುಕೊಳ್ಳುವವರಿಗೆ ಶೀಘ್ರದಲ್ಲಿ ಪರಿಹಾರ ವಿತರಣೆ ಕಾರ್ಯ ಆರಂಭವಾಗಲಿದೆ ಎಂದರು. ಪ್ರಸನ್ನ ಕೆರೆಕೈ, ಮೋಹನ್ ಶೇಟ್, ಸದಾನಂದ, ಕೃಷ್ಣ ಸೂರ್ನ, ಮಂಜಪ್ಪ ಗುಡ್ಡೆಮನೆ, ಮೋಹನ್ ಸಾಲೇಕೊಪ್ಪ, ಮಹಾಬಲೇಶ್ವರ ಅರೆಹದ, ಗಣಪತಿ ಬಚ್ಚಗಾರು ಇತರರಿದ್ದರು.