More

    ಪಣಂಬೂರು ಕಡಲಲ್ಲಿ ದೋಣಿ ಅವಗಢ, ಓರ್ವ ನಾಪತ್ತೆ

    ಮಂಗಳೂರು: ಮಂಗಳೂರಿನ ಕಡಲಿನಲ್ಲಿ ಶನಿವಾರ ಬೆಳಗ್ಗೆ ದೋಣಿ ಅವಗಢ ಸಂಭವಿಸಿದ್ದು ಓರ್ವ ಮೀನುಗಾರ ನಾಪತ್ತೆಯಾಗಿದ್ದಾರೆ.
    ಪಣಂಬೂರು ಬೀಚ್‌ ಸಮೀಪವೇ ಈ ಅವಗಢ ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ದೋಣಿ ಹಾಕಿ ಮೀನು ಹಿಡಿಯುವ ವೇಳೆ ಬೀಸಿದ ಗಾಳಿಗೆ ಗಿಲ್‌ನೆಟ್‌ ಬೋಟ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
    ಅಝರ್‌ ಎಂಬವರ ಮಾಲೀಕತ್ವದ ಈ ದೋಣಿಯಲ್ಲಿ ಬೆಂಗ್ರೆಯ ಅಬ್ದುಲ್‌ ಅಜೀಜ್‌, ಇಮ್ತಿಯಾಜ್‌, ಸಿನಾನ್‌, ಫೈರೋಜ್‌ ಹಾಗೂ ಶರೀಫ್‌ ಎಂಬವರಿದ್ದರು. ಇವರಲ್ಲಿ ಶರೀಫ್‌ ನೀರುಪಾಲಾಗಿದ್ದು ಅವರ ಶೋಧ ಕಾರ್ಯ ನಡೆದಿದೆ. ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ದೋಣಿಯನ್ನು ದಡಕ್ಕೆ ಎಳೆದು ತರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts