More

    ಉತ್ಸಾಹದಿಂದ ಪ್ರಚಾರ ಭಾಷಣ ಮಾಡಿ ಕೊನೆಯಲ್ಲಿ ಎಡವಟ್ಟು ಮಾಡಿದ ಜ್ಯೋತಿರಾದಿತ್ಯ ಸಿಂಧಿಯಾ

    ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದಿರುವ ಜ್ಯೋತಿರಾದಿತ್ಯ ಸಿಂಧಿಯಾ ಎಡವಟ್ಟು ಮಾಡಿದ್ದಾರೆ. ಮಧ್ಯಪ್ರದೇಶ ಉಪಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್​ಗೆ ಮತ ಹಾಕಿ ಎಂದು ಹೇಳುವ ಮೂಲಕ ಟ್ರೋಲ್​ಗೆ ಒಳಗಾಗಿದ್ದಾರೆ.

    ಡಬ್ರಾದಲ್ಲಿ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಪರ ಮತ ಯಾಚನೆ ಮಾಡಿದ ಸಿಂಧಿಯಾ, ಉತ್ಸಾಹದಿಂದ ಭಾಷಣವನ್ನು ಮಾಡುತ್ತಾರೆ. ಆದರೆ ಕೊನೆಯಲ್ಲಿ ಬಾಯ್ತಪ್ಪಿ ಕೈ ಗುರುತಿಗೆ ಮತ ಹಾಕಿ ಎನ್ನುತ್ತಾರೆ. ಆ ವಿಡಿಯೋ ಇದೀಗ ಎಲ್ಲಕಡೆ ವೈರಲ್​ ಆಗಿದೆ. ಇದನ್ನೂ ಓದಿ: ಪಂಜರ ಮುರಿದು ಸಫಾರಿ ಪಾರ್ಕ್​ನಿಂದ ಹುಲಿ ಎಸ್ಕೇಪ್​: ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!

    ಅಷ್ಟೇ ಅಲ್ಲ, ಮಧ್ಯಪ್ರದೇಶ ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು, ಖಂಡಿತ ನವೆಂಬರ್ 3ರಂದು ಕಾಂಗ್ರೆಸ್​ಗೆ ಮತ ಹಾಕುವುದಾಗಿ ಮಧ್ಯಪ್ರದೇಶದ ಜನರು ನಿಮಗೆ ಭರವಸೆ ಕೊಡುತ್ತಾರೆ ಎಂದು ಕಾಲೆಳೆದಿದೆ.  ಆದರೆ ನಂತರ ಸಿಂಧಿಯಾ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಕೈ ಗುರುತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕಮಲಕ್ಕೆ ಮತ ಹಾಕಿ ಎಂದು ಹೇಳಿದ್ದಾರೆ.

    ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್​ 3ರಂದು ಉಪಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರಚಾರವೂ ಭರ್ಜರಿಯಾಗಿ ಸಾಗುತ್ತಿದೆ.

    ತಾಯಿಯ ಅಳುವ ಧ್ವನಿ ಕೇಳಿ ರಕ್ಷಣೆಗೆ ಓಡೋಡಿ ಬಂದ ಮಗಳ ಬರ್ಬರ ಹತ್ಯೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts