More

    ರಾಜ್ಯದ ನಾಲ್ಕೂ ದಿಕ್ಕಿನಿಂದ ಬಿಜೆಪಿ ರಥಯಾತ್ರೆ; ಪ್ರಾಥಮಿಕ ಸಭೆಯಲ್ಲಿ ಸಿಕ್ತು ಪ್ರಮುಖರ ಸಮ್ಮತಿ

    ಬೆಂಗಳೂರು: ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸಲು, ಚುನಾವಣೆಗೆ ಪೂರಕವಾಗಿ ರಾಜ್ಯದ ನಾಲ್ಕು ದಿಕ್ಕಿನಿಂದ ರಥಯಾತ್ರೆ ಕೈಗೆತ್ತಿಕೊಳ್ಳಲು ಪ್ರಮುಖರ ಪ್ರಾಥಮಿಕ ಸಭೆ ಸಮ್ಮತಿಸಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ಅಂತಿಮವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸಭೆ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಮುಂದಿನ ಎರಡು ತಿಂಗಳು ವಿಧಾನಮಂಡಲ ಅಧಿವೇಶನ ಜತೆಗೆ ರಾಜಕೀಯ, ಸಂಘಟನಾತ್ಮಕ ಚಟುವಟಿಕೆಗಳ ರೂಪುರೇಷೆ ಬಗ್ಗೆ ಚರ್ಚಿಸಿದ್ದು, ಹಿರಿಯರ ಸಮಕ್ಷಮ ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮವಾಗಲಿದೆ ಎಂದರು.

    ವಿಜಯಸಂಕಲ್ಪ ಅಭಿಯಾ‌ನ ಶನಿವಾರದಿಂದ ಶುರುವಾಗಲಿದೆ. ವಿಜಯಪುರ ಜಿಲ್ಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದರೆ, ನಾನು ಒಂದು ಕಡೆ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ, ಕೇಂದ್ರ, ರಾಜ್ಯದ ಸಚಿವರು ವಿಭಿನ್ನ ಸ್ಥಳಗಳಲ್ಲಿ ಚಾಲನೆ ನೀಡಲಿದ್ದು, ಕೇಂದ್ರ-ರಾಜ್ಯ ಸರ್ಕಾರದ ಕೊಡುಗೆಗಳು, ಯೋಜನೆಗಳ ಕುರಿತು ಕರಪತ್ರ ಹಂಚಿಕೆ ಸೇರಿ ವಿವಿಧ ಪ್ರಚಾರ ತಂತ್ರಗಳು ಅನುಷ್ಠಾನಕ್ಕೆ ಬರಲಿವೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts