ಮಳವಳ್ಳಿ: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ವೇಳೆ ಬಿಲ್ಡರ್ಗಳ ಬಳಿ ದೊರೆತ 80 ಕೋಟಿ ರೂ.ಗೂ ಅಧಿಕ ಹಣವನ್ನು ಕಾಂಗ್ರೆಸ್ ಸರ್ಕಾರ ಪಂಚರಾಜ್ಯ ಚುನಾವಣೆಗಾಗಿ ಸಂಗ್ರಹಿಸಿದೆ ಎಂದ ಆರೋಪಿಸಿ ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ತಾಲೂಕು ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮುಖಂಡರಾದ ಜಿ.ಮುನಿರಾಜು, ಹೆಬ್ಬಣಿ ಬಸವರಾಜು, ಕೃಷ್ಣ, ಅಶೋಕ್, ನಂದೀಪುರ ಕುಮಾರ, ಶಶಿ, ಕನ್ನಳ್ಳಿ ಪ್ರಸಾದ್, ಶಿವಲಿಂಗಸ್ವಾಮಿ, ಪುಟ್ಟಸ್ವಾಮಿ, ವೇಣು, ರಾಜೀವ್ ಇದ್ದರು.