ವಾರಂಗಲ್: ತೆಲಂಗಾಣದ ನಿಜಾಮಾಬಾದ್ನ ಸಂಸದ ಅರವಿಂದ್ ಧರ್ಮಪುರಿ ಅವರ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಸದಸ್ಯರು ಹಲ್ಲೆ ನಡೆಸಿದ್ದಾರೆ.
ಆತ್ಮ ನಿರ್ಭರ ಭಾರತ್ ಅಭಿಯಾನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅರವಿಂದ್ ಧರ್ಮಪುರಿ ಅವರ ವಾಹನವನ್ನು ಅಡ್ಡಗಟ್ಟಿದ ಟಿಆರ್ಎಸ್ ಕಾರ್ಯಕರ್ತರು, ಸಂಸದನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೋದರೂ ಕೂಡ ಹಿಂದಿನಿಂದ ಬೆನ್ನಟ್ಟಿದ್ದಾರೆ.
ಟಿಆರ್ಎಸ್ನಲ್ಲಿರುವ ಹಿಂದು ವಿರೋಧಿ ಸದಸ್ಯರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಹೈವೇದಲ್ಲಿ ನಮ್ಮ ವಾಹನವನ್ನು ಬೆನ್ನಟ್ಟಿ ಬಂದಿದ್ದಾರೆ. ಜನಪ್ರತಿನಿಧಿಗಳ ಮೇಲೆ ಹೀಗೆ ಹಾಡಹಗಲಲ್ಲೇ ದಾಳಿ ಆಗುತ್ತದೆ ಎಂದರೆ ಇದು ಮುಖ್ಯಮಂತ್ರಿ ಮತ್ತು ರಾಜ್ಯದ ಡಿಜಿಪಿ ತಲೆ ತಗ್ಗಿಸುವ ವಿಚಾರ ಎಂದು ಅರವಿಂದ್ ಧರ್ಮಾಪುರಿ ಅವರು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
ಬಾಂಗ್ಲಾದೇಶದ ಮಹಿಳೆ, ಮಗುವನ್ನು ಬಹುದೊಡ್ಡ ಅಪಾಯದಿಂದ ಪಾರು ಮಾಡಿದ ಬಿಎಸ್ಎಫ್ ಯೋಧರು…