ನವದೆಹಲಿ: ಜಾಗತಿಕವಾಗಿ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡಿರುವ ಮಾರಕ ಕರೊನಾ ವೈರಸ್ ಭಾರತದ ಮೇಲೂ ವಕ್ರದೃಷ್ಟಿ ಬೀರಿದೆ. 50 ಮಂದಿಗೆ ಸೋಂಕು ತಗುಲಿರುವುದು ಅಧಿಕೃತವಾಗಿರುವ ಬೆನ್ನಲ್ಲೇ ಇನ್ನಷ್ಟು ಸೋಂಕು ಹರಡದಿರಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರೊಬ್ಬರು ಸಲಹೆಯೊಂದನ್ನು ನೀಡಿದ್ದಾರೆ.
ಸಂಸದ ದಿಲೀಪ್ ಘೋಷ್ ಮಾಧ್ಯಮಗಳೊಂದಿಗೆ ಮಾತನಾಡಿ, ಯಾರು ಪ್ರಕೃತಿಯಿಂದ ದೂರ ಉಳಿದಿದ್ದಾರೋ ಅಂಥವರ ಮೇಲೆ ಕರೊನಾ ದಾಳಿ ಮಾಡುತ್ತದೆ. ಯಾರು ಪ್ರಕೃತಿ ಜತೆಗೆ ನಿರಂತರ ಸಂಪರ್ಕ ಹೊಂದಿರುತ್ತಾರೋ ಅವರಿಗೆ ಕರೊನಾ ಏನು ಮಾಡುವುದಿಲ್ಲ ಎಂದಿದ್ದರೆ.
ಮುಂದುವರಿದು ಮಾತನಾಡಿ, ಕರೊನಾದಿಂದ ತಪ್ಪಿಸಿಕೊಳ್ಳಲು ನಿಮ್ಮ ಬಟ್ಟೆಗಳನ್ನು ಸುಮಾರು 2 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ, ಸೂರ್ಯನ ತಾಪ ಕರೊನಾ ವೈರಸ್ ಅನ್ನು ಕೊಲ್ಲಲಿದೆ ಎಂದು ಹೇಳಿದ್ದಾರೆ.
ಮಿಯಾಂದ್ಪುರ ಕ್ಷೇತ್ರದ ಸಂಸದರಾಗಿರುವ ದಿಲೀಪ್ ಘೋಷ್ ಇತ್ತೀಚೆಗಷ್ಟೇ ಗೋವಿನ ಹಾಲಿನಿಂದ ಚಿನ್ನವನ್ನು ತೆಗೆಯಬಹುದು ಎಂದು ಹೇಳಿಕೆ ನೀಡಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಘೋಷ್ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಬಳಿಕ ಘೋಷ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.
ಭಾರತದಲ್ಲಿ ಕೇರಳ, ದೆಹಲಿ, ಜೈಪುರ, ಆಗ್ರಾ, ನೋಯ್ಡಾ, ಜಮ್ಮು, ಪುಣೆ, ಪಂಜಾಬ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕರೊನಾ ಶಂಕಿತರ ಪ್ರಕರಣ ವರದಿಯಾಗಿದೆ. (ಏಜೆನ್ಸೀಸ್)
ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ!: ಕರೊನಾ ವೈರಸ್ ತಡೆಯಲು ಲಡಾಕ್ ಸರ್ಕಾರದ ಕ್ರಮ
ಕರೊನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡ ಉದ್ಯೋಗಿಗಳಿಗೆ ರಜೆ ನೀಡಿ: ಖಾಸಗಿ ಸಂಸ್ಥೆಗಳಿಗೆ ಸಲಹೆ