ಭೋಪಾಲ್: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿಯವರು ನಿಧಿ ಸಂಗ್ರಹ ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ರಾಮ ಮಂದಿರ ಹೆಸರಲ್ಲಿ ಹಣ ಸಂಗ್ರಹಿಸಿ ಅದರಲ್ಲೇ ಕುಡಿದು ಮಜಾ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕಾಂಗ್ರೆಸ್ ಶಾಸಕ ಕಾಂತಿಲಾಲ್ ಬಹುರಿಯಾ ಇಂತದ್ದೊಂದು ಆರೋಪವನ್ನು ಮಾಡಿದ್ದಾರೆ. ಬಿಜೆಪಿಯವರು ವರ್ಷದಿಂದ ರಾಮ ಮಂದಿರ ಹೆಸರಲ್ಲಿ ನಿಧಿ ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಕೆಲವು ನಾಯಕರು ಹಗಲೆಲ್ಲ ಶ್ರೀ ರಾಮನ ಹೆಸರಲ್ಲಿ ದುಡ್ಡು ಸಂಗ್ರಹಿಸುತ್ತಾರೆ. ರಾತ್ರಿ ಅದೇ ಹಣದಲ್ಲಿ ಕುಡಿದು ಮಜಾ ಮಾಡುತ್ತಾರೆ ಎಂದು ಅವರು ದೂರಿದ್ದಾರೆ.
ಕಾಂತಿಲಾಲ್ ಅವರ ಈ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ರಾಮ ಮಂದಿರಕ್ಕೆ ಸಂಗ್ರಹಿಸಲಾಗುತ್ತಿರುವ ನಿಧಿ ನೇರವಾಗಿ ರಾಮ ಮಂದಿರ ಟ್ರಸ್ಟ್ನ ಖಾತೆಗೆ ಹಾಕಲಾಗುತ್ತಿದೆ ಎಂದು ಮಧ್ಯಪ್ರದೇಶ ಸ್ಪೀಕರ್ ಹೇಳಿದ್ದಾರೆ. (ಏಜೆನ್ಸೀಸ್)
ಪ್ರೇಮಿಗಳ ದಿನಕ್ಕೆ ತಾಜ್ ಹೋಟೆಲ್ ಸ್ಪೆಷಲ್ ಗಿಫ್ಟ್? ಪ್ರೇಮಿಗಳಿಗೆ ವಾರದ ಕಾಲ ಫ್ರೀ ರೂಂ!?
ಆಕ್ಸ್ಫರ್ಡ್ ನಿಘಂಟಿನಲ್ಲಿ ಸೇರಿದ ‘ಆತ್ಮನಿರ್ಭರತಾ’: ವರ್ಷದ ಶಬ್ದವಾಗಿ ಆಯ್ಕೆ