More

    ‘ಬಿಜೆಪಿಯವರು ರಾಮ ಮಂದಿರ ಹೆಸರಲ್ಲಿ ನಿಧಿ ಸಂಗ್ರಹಿಸಿ ಅದೇ ದುಡ್ಡಲ್ಲಿ ಹೆಂಡ ಕುಡೀತಿದಾರೆ’

    ಭೋಪಾಲ್​: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿಯವರು ನಿಧಿ ಸಂಗ್ರಹ ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದ ಕಾಂಗ್ರೆಸ್​ ನಾಯಕ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ರಾಮ ಮಂದಿರ ಹೆಸರಲ್ಲಿ ಹಣ ಸಂಗ್ರಹಿಸಿ ಅದರಲ್ಲೇ ಕುಡಿದು ಮಜಾ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

    ಕಾಂಗ್ರೆಸ್​ ಶಾಸಕ ಕಾಂತಿಲಾಲ್ ಬಹುರಿಯಾ ಇಂತದ್ದೊಂದು ಆರೋಪವನ್ನು ಮಾಡಿದ್ದಾರೆ. ಬಿಜೆಪಿಯವರು ವರ್ಷದಿಂದ ರಾಮ ಮಂದಿರ ಹೆಸರಲ್ಲಿ ನಿಧಿ ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಕೆಲವು ನಾಯಕರು ಹಗಲೆಲ್ಲ ಶ್ರೀ ರಾಮನ ಹೆಸರಲ್ಲಿ ದುಡ್ಡು ಸಂಗ್ರಹಿಸುತ್ತಾರೆ. ರಾತ್ರಿ ಅದೇ ಹಣದಲ್ಲಿ ಕುಡಿದು ಮಜಾ ಮಾಡುತ್ತಾರೆ ಎಂದು ಅವರು ದೂರಿದ್ದಾರೆ.

    ಕಾಂತಿಲಾಲ್​ ಅವರ ಈ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ರಾಮ ಮಂದಿರಕ್ಕೆ ಸಂಗ್ರಹಿಸಲಾಗುತ್ತಿರುವ ನಿಧಿ ನೇರವಾಗಿ ರಾಮ ಮಂದಿರ ಟ್ರಸ್ಟ್​ನ ಖಾತೆಗೆ ಹಾಕಲಾಗುತ್ತಿದೆ ಎಂದು ಮಧ್ಯಪ್ರದೇಶ ಸ್ಪೀಕರ್​ ಹೇಳಿದ್ದಾರೆ. (ಏಜೆನ್ಸೀಸ್​)

    ಪ್ರೇಮಿಗಳ ದಿನಕ್ಕೆ ತಾಜ್​ ಹೋಟೆಲ್​ ಸ್ಪೆಷಲ್​ ಗಿಫ್ಟ್​? ಪ್ರೇಮಿಗಳಿಗೆ ವಾರದ ಕಾಲ ಫ್ರೀ ರೂಂ!?

    ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೇರಿದ ‘ಆತ್ಮನಿರ್ಭರತಾ’: ವರ್ಷದ ಶಬ್ದವಾಗಿ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts