More

    ಸಮಸ್ಯೆಗೆ ಸಂಕನೂರ ಸ್ಪಂದನೆ

    ಹುಬ್ಬಳ್ಳಿ: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ನಗರದ ಆಯುರ್ವೆದ ಸೇವಾ ಸಮಿತಿಯ ಆಯುರ್ವೆದ ಮಹಾವಿದ್ಯಾಲಯದಲ್ಲಿ ಪ್ರಚಾರ ನಡೆಸಿದರು.

    ಹು-ಧಾ ಪೂರ್ವ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ಮಾತನಾಡಿ, ಕಳೆದ ಅವಧಿಯಲ್ಲಿ ಎಸ್.ವಿ. ಸಂಕನೂರ ಅವರು ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳ ನಿವಾರಣೆಗೆ ವಿಧಾನ ಪರಿಷತ್​ನಲ್ಲಿ ಧ್ವನಿ ಎತ್ತಿದ್ದಾರೆ. ಈ ಬಾರಿಯೂ ಅವರಿಗೆ ಪ್ರಥಮ ಪ್ರಾಶಸ್ಱದ ಮತ ನೀಡುವಂತೆ ಮನವಿ ಮಾಡಿದರು. ಪೂರ್ವ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ರವೀಂದ್ರ ವೈ., ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಆಯುರ್ವೆದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್., ಬಿಜೆಪಿಯ ಶಿವು ಮೆಣಸಿನಕಾಯಿ, ಪ್ರಶಾಂತ ಎ.ಎಸ್., ವಿನಯ ಸಜ್ಜನರ, ಜಗದೀಶ ಬುಳ್ಳಾನವರ, ರಂಗಾ ಬದ್ದಿ, ಬಸವರಾಜ ಅಮ್ಮಿನಬಾವಿ, ರಾಜು ಕೋರ್ಯುಣಮಠ, ಮಂಜುನಾಥ ಬಿಜ ವಾಡ, ಡಾ. ಮೃತ್ಯುಂಜಯ ಹಿರೇಮಠ, ಡಾ. ಸಮಿರಕುಮಾರ, ಡಾ. ವಿನಯ ಕುಲಕರ್ಣಿ, ಡಾ.ಮಹೇಶ ಸಾಲಿಮಠ, ಡಾ. ಸಂದೀಪ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts