ಬೆಳಗಾವಿ: ಮಹಾಮಾರಿ ಕರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಹೀಗಾಗಿ ಜ. 16ರಂದು ತಮ್ಮ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.ಕೋವಿಡ್-19 ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೂವು, ಗುಚ್ಛ ನೀಡುವುದು ಸುರಕ್ಷಿತವಲ್ಲ.
ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರು ಖುದ್ದಾಗಿ ಆಗಮಿಸುವ ಅಗತ್ಯವಿಲ್ಲ. ತಾವು ಇದ್ದ ಸ್ಥಳದಿಂದಲೇ ಶುಭಾಶಯ ಕೋರಿದರೆ ಸಾಕು ಎಂದು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.