More

    ‘ಸಿಎಂ ಯೋಗಿ ಜೀ… ನನ್ನನ್ನು ಕ್ಷಮಿಸಿ’ ಎನ್ನುತ್ತಲೇ ಎನ್​ಕೌಂಟರ್ ಭಯದಿಂದ ಪೊಲೀಸರಿಗೆ ಶರಣಾದ ಖದೀಮ!

    ಮುಜಾಫರ್‌ನಗರ: ಎನ್​ಕೌಂಟರ್ ಹಾಗೂ ಬುಲ್ಡೋಜರ್ ಮೂಲಕ ಮನೆಗಳನ್ನು ಧ್ವಂಸ ಮಾಡುತ್ತಿರುವ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್​ಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಸಂಖ್ಯೆ ಕಡಿಮೆಯಾಗಿದೆ. ಜೀವ ಭಯಕ್ಕೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ.

    ಇದೀಗ ಬೈಕ್ ಕಳ್ಳನೊಬ್ಬ ಪ್ರಾಣ ಭಯದಿಂದ “ಸಿಎಂ ಯೋಗಿ ಜೀ… ನಾನು ತಪ್ಪು ಮಾಡಿದೆ. ನನ್ನನ್ನು ಕ್ಷಮಿಸಿ” ಎಂದು ಬರೆದ ಬೋರ್ಡ್ ಹಿಡಿದುಕೊಂಡು ಮುಜಾಫರ್‌ನಗರದ ಮನ್ಸೂರ್‌ಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ. ಅಂಕುರ್ ಎಂಬಾತ ಪೊಲೀಸರಿಗೆ ಶರಣಾಗಿ ತನ್ನ ಕೃತ್ಯವನ್ನು ಒಪ್ಪಿಕೊಂಡಿರುವ ಆರೋಪಿ.

    ಇದನ್ನೂ ಓದಿ: ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶ | ಕೇಸರಿ ಬಣ್ಣದ ಬ್ಲೌಸ್ ಪೀಸ್​​ಗಾಗಿ ಮುಗಿಬಿದ್ದ ಮಹಿಳೆಯರು!

    ಆರೋಪಿ ಅಂಕುರ್ ಜೀವ ಭಯದಿಂದ ತನ್ನ ಗ್ರಾಮದ ಹಿರಿಯರು ಹಾಗೂ ಕುಟುಂಬದವರೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕ್ಷಮೆ ಯಾಚಿಸಿ, ಇನ್ನು ಮುಂದೆ ಯಾವ ತಪ್ಪನ್ನೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಹಿನ್ನೆಲೆ ಪರೀಶಿಲಿಸಿದಾಗ, ದರೋಡೆ ಹಾಗೂ ಕೊಲೆ ಯತ್ನ ಕೃತ್ಯಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಹೀಗಾಗಿ ಐಪಿಸಿ ಸೆಕ್ಷನ್ 390 ಮತ್ತು ಕೊಲೆ ಯತ್ನ (ಐಪಿಸಿ ಸೆಕ್ಷನ್ 307) ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)

    ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ರಾಜೇಶ್ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts