ಸಿರವಾರ: ದ್ವಿಚಕ್ರ ವಾಹನದ ಮೇಲೆ ಸರ್ಕಾರಿ ಬಸ್ ಹರಿದು, ಬೈಕ್ನಲ್ಲಿದ್ದ ತಂದೆ-ಮಗ ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಅತ್ತನೂರು ಹೊರವಲಯದ ಪೆಟ್ರೋಲ್ ಬಂಕ್ ಬಳಿ ನಡೆದ ಘಟನೆಯಲ್ಲಿ ನಿಲೋಗಲ್ ಕ್ಯಾಂಪಿನ ನಾರಾಯಣ ಅವರ ಕಾಲು ಮುರಿದಿದ್ದು, ಹಿಂಬದಿಯಲ್ಲಿದ್ದ ಮಗ ಕಾರ್ತಿಕಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: BBKS10: ಮಾತಿನ ಮೇಲೆ ನಿಗಾಯಿರಲಿ!; ‘ಕಿಚ್ಚ’ನ ಕ್ಲಾಸ್ಗೆ ಮನೆಮಂದಿ ಗಪ್ಚುಪ್!
ಪಟ್ಟಣದಿಂದ ರಾಯಚೂರು ಕಡೆ ಹೊರಟಿದ್ದ ಸಾರಿಗೆ ಬಸ್ ಚಾಲಕ, ಮುಂದಿದ್ದ ಮತ್ತೊಂದು ಬಸ್ಸನ್ನು ಓವರ್ ಟೇಕ್ ಮಾಡಲು ಹೋಗಿ ಈ ಘಟನೆ ನಡೆದಿದೆ. ಅಪಘಾತದ ನಂತರ ಬಸ್ ರಸ್ತೆ ಪಕ್ಕದಲ್ಲಿದ್ದ ಭತ್ತದ ಗದ್ದೆಗೆ ವಾಲಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.