More

    BBKS10: ಮಾತಿನ ಮೇಲೆ ನಿಗಾಯಿರಲಿ!; ‘ಕಿಚ್ಚ’ನ ಕ್ಲಾಸ್​ಗೆ ಮನೆಮಂದಿ ಗಪ್​ಚುಪ್​!

    ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಪ್ರಾರಂಭಗೊಂಡು ಇದೀಗ ಐದನೇ ವಾರದತ್ತ ಸಾಗುತ್ತಿದ್ದು, ಈ ಮಧ್ಯೆ ವಾರ ಪೂರ್ತಿ ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆದ ಮಾತಿನ ಚಕಮಕಿ, ಏಕವಚನದ ಆರ್ಭಟಗಳನ್ನು ವೀಕ್ಷಕರು ತೀವ್ರವಾಗಿ ಖಂಡಿಸಿದ್ದಾರೆ.

    ಇದನ್ನೂ ಓದಿ: ಮಾರ್ಕ್ ಜುಕರ್‌ಬರ್ಗ್ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ; ಪ್ರೀತಿ, ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದವೆಂದ ಮೆಟಾ ಸಿಇಒ

    ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನಟ, ನಿರೂಪಕ ಕಿಚ್ಚ ಸುದೀಪ್​ ಇಂದಿನ ವಾರದ ಕಥೆ ಕಿಚ್ಚನ ಜತೆ ಸ್ಪರ್ಧಿಗಳಿಗೆ ವಿಶೇಷ ಮನವರಿಕೆ ಕ್ಲಾಸ್​ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.

    ಬಿಗ್​ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ರೋಚಕ ತಿರುವುಗಳು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಮಧ್ಯೆ ಆರೋಗ್ಯಕರ ಚರ್ಚೆ, ಮಾತುಗಳು ನಡೆಯುವ ಬದಲಿಗೆ ಕೇವಲ ಬೈಗುಳ, ಏಕವಚನದ ಆರ್ಭಟ ಮಾತ್ರ ಕಾಣಿಸುತ್ತಿದೆ. ವಾರವಿಡೀ ವೀಕ್ಷಕರಿಗೆ ತಮ್ಮ ವರ್ತನೆಯಿಂದ ಬೇಸರಗೊಳಿಸಿರುವ ಸ್ಪರ್ಧಿಗಳಿಗೆ ಸುದೀಪ್​ ಅವರು ಯಾವ ರೀತಿ ಬುದ್ದಿ ಹೇಳಲಿದ್ದಾರೆ, ಯಾರಿಗೆಲ್ಲಾ ಮನವರಿಕೆ ಮಾಡುತ್ತಾರೆ ಎಂಬುದು ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ನಾಳೆ ಸಿಎಂ ಆಗೋದಾದ್ರೆ ನಮ್ಮ 19 ಶಾಸಕರ ಬೆಂಬಲವಿದೆ; ಡಿಕೆಶಿ​ಗೆ ಓಪನ್​ ಆಫರ್​ ಕೊಟ್ಟ ಎಚ್​ಡಿಕೆ!

    ಈ ಕುರಿತಂತೆ ಈಗಾಗಲೇ ಎರಡು ಪ್ರೋಮೋ ಕೂಡ ಹೊರಬಿದ್ದಿದ್ದು, “ಬಳೆ ಬಲಹೀನತೆಯ ಸಂಕೇತನಾ ಅಥವಾ ಬಲಶಾಲಿಯ ಸಂಕೇತನಾ? ಕೆಲವರಿಗೆ ಮನವರಿಕೆ ಮಾಡಬೇಕು” ಎಂದ ಸುದೀಪ್​, “ಬಳೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಲವೊಮ್ಮೆ ಸೈಲೆಂಟ್​ ಇದ್ರೆ ಒಳ್ಳೇದು ಅನ್ನೋದು ಇದಕ್ಕೇನೆ, ಮಾತಿನ ಮೇಲೆ ನಿಗಾಯಿರಲಿ” ಎಂದು ಹೇಳಿದ್ದಾರೆ. ಒಟ್ಟಾರೆ ವೀಕ್ಷಕರು ಇಂದಿನ ಸಂಚಿಕೆ ನೋಡಲು ಕಾತರದಿಂದ ಕಾಯತೊಡಗಿದ್ದಾರೆ.

    ನಾಳೆ ಸಿಎಂ ಆಗೋದಾದ್ರೆ ನಮ್ಮ 19 ಶಾಸಕರ ಬೆಂಬಲವಿದೆ; ಡಿಕೆಶಿ​ಗೆ ಓಪನ್​ ಆಫರ್​ ಕೊಟ್ಟ ಎಚ್​ಡಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts