ರಾಯಚೂರು: ಎರಡು ದ್ವಿಚಕ್ರ ವಾಹನ ಮುಖಾ ಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಬಳಿ ನಡೆದಿದೆ.
ಮಲ್ಲದಗುಡ್ಡ ಗ್ರಾಮದ ವಿರುಪಾಕ್ಷಪ್ಪ ಗೌಡ (45), ಆತನ ಪತ್ನಿ ಮಲ್ಲಮ್ಮ (38) ಸಾವನ್ನಪ್ಪಿದ್ದು, ಮತ್ತೋರ್ವ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ನಾಲ್ಕು ವರ್ಷದ ಬಾಲಕನನ್ನು ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿರವಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)
ತರಬೇತಿ ಪಡೆಯದ ಪೈಲೆಟ್ನಿಂದ ವಿಮಾನ ಲ್ಯಾಂಡಿಂಗ್: ಈ ವಿಮಾನಯಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ