ಕಲಬುರಗಿ: ಜಿಲ್ಲೆಯ ಭೀಮಸೇನೆಯ ಅಧ್ಯಕ್ಷನಾಗಿರುವ ಸತೀಷ್ ಕಂಬಾನೂರನನ್ನು ದುಷ್ಕರ್ಮಿಗಳು ಹಾಡಹಗಲೇ ಕೊಂದಿದ್ದಾರೆ.
ಶಹಾಬಾದ್ ನಗರದ ನಿವಾಸಿಯಾಗಿದ್ದ ಸತೀಷ್ ಇಂದು ಬೆಳಗ್ಗೆ ವಾಡಿ ಎಸಿಸಿ ಕಾರ್ಖಾನೆಗೆ ಕೆಲಸಕ್ಕೆಂದು ತನ್ನ ಬೈಕ್ನಲ್ಲಿ ಹೋಗುತ್ತಿದ್ದ. ಶಹಾಬಾದ್ ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಸಂದರ್ಭದಲ್ಲಿ ಆತನ ಮೇಲೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.
ಶಹಾಬಾದ್ನ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ಹಿಂದೆ ಸತೀಶ್ ಅವರ ಸಹೋದರ ಗಿರೀಶ್ ಅವರನ್ನೂ ಸಹ ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ಗಿರೀಶ್ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. (ದಿಗ್ವಿಜಯ ನ್ಯೂಸ್)