More

    ಕಲಬುರಗಿಯಲ್ಲಿ ಭೀಮಸೇನೆ ಅಧ್ಯಕ್ಷನ ಹತ್ಯೆ: ಮಚ್ಚು ಲಾಂಗುಗಳಿಂದ ಹೊಡೆದ ಕೊಂದ ದುಷ್ಕರ್ಮಿಗಳು

    ಕಲಬುರಗಿ: ಜಿಲ್ಲೆಯ ಭೀಮಸೇನೆಯ ಅಧ್ಯಕ್ಷನಾಗಿರುವ ಸತೀಷ್​ ಕಂಬಾನೂರನನ್ನು ದುಷ್ಕರ್ಮಿಗಳು ಹಾಡಹಗಲೇ ಕೊಂದಿದ್ದಾರೆ.

    ಶಹಾಬಾದ್​ ನಗರದ ನಿವಾಸಿಯಾಗಿದ್ದ ಸತೀಷ್​ ಇಂದು ಬೆಳಗ್ಗೆ ವಾಡಿ ಎಸಿಸಿ ಕಾರ್ಖಾನೆಗೆ ಕೆಲಸಕ್ಕೆಂದು ತನ್ನ ಬೈಕ್​ನಲ್ಲಿ ಹೋಗುತ್ತಿದ್ದ. ಶಹಾಬಾದ್​ ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಸಂದರ್ಭದಲ್ಲಿ ಆತನ ಮೇಲೆ ಅಟ್ಯಾಕ್​ ಮಾಡಿದ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

    ಶಹಾಬಾದ್​ನ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ಹಿಂದೆ ಸತೀಶ್​ ಅವರ ಸಹೋದರ ಗಿರೀಶ್​ ಅವರನ್ನೂ ಸಹ ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ಗಿರೀಶ್​ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts