More

    ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ

    ತಾಳಿಕೋಟೆ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭದ್ರ ನೆಲೆ ಕಟ್ಟಿಕೊಂಡಿದ್ದು, ಭಂಟನೂರ ಗ್ರಾಪಂಗೆ ಸಂಪೂರ್ಣ ಕಾಂಗ್ರೆಸ್ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡಿದ್ದಾರೆಂದು ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ(ಯಾಳಗಿ) ಹೇಳಿದರು.
    ಭಂಟನೂರ ಗ್ರಾಮ ಪಂಚಾಯಿತಿಗೆ ಆಯ್ಕೆಗೊಂಡ ಸದಸ್ಯರಿಗೆ ಮಂಗಳವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ಕಾಂಗ್ರೆಸ್ ಪಕ್ಷ ಅಧಿಕಾರಾವಧಿಯಲ್ಲಿ ಮಾಡಿರುವ ಕಾರ್ಯಗಳನ್ನು ಈ ಕ್ಷೇತ್ರದ ಜನರು ಮೆಚ್ಚಿಕೊಂಡು ಗ್ರಾಪಂ ಚುನಾವಣೆಯಲ್ಲಿ ಬೆಂಬಲಿಸಿರುವುದು ಕಾಣುತ್ತಿದೆ. ಕ್ಷೇತ್ರದ ಅತಿ ಹೆಚ್ಚು ಗ್ರಾಪಂಗಳು ಕಾಂಗ್ರೆಸ್ ಮಡಿಲಿಗೆ ಸಿಗಲಿವೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.
    ಹಣಮಗೌಡ ಬಸರಡ್ಡಿ, ಬಸನಗೌಡ ಬಸರಡ್ಡಿ, ಶಿವರಡ್ಡಿಗೌಡ ಐನಾಪೂರ, ಬಲವಂತ್ರಾಯ ನಡಹಳ್ಳಿ, ಗೌಡಪ್ಪಗೌಡ ಪದರಡ್ಡಿ, ಸಂಗನಗೌಡ ಆನೇಸೂರ, ಮಲ್ಲನಗೌಡ ಬಿರಾದಾರ, ಕೃಷ್ಣಾ ತಳಹಳ್ಳಿ, ಸೋಮನಗೌಡ ಮೂಲಿಮನಿ, ಚಂದ್ರಶೇಖರ ಆಲ್ಯಾಳ, ಹಣಮಗೌಡ ಬಿರಾದಾರ, ಬಸವರಾಜ ಸಿಂಗನಳ್ಳಿ, ರೇವಣಸಿದ್ದ ಬ್ಯಾಕೋಡ, ಮಂಜು ಗೋನಾಳ, ನಾಗಪ್ಪ ಹೂಗಾರ, ಸಿದ್ರಾಮಯ್ಯ ಪತ್ತೇಪೂರ, ಸಂಗನಗೌಡ ನಾವದಗಿ, ಬಸವರಾಜ ವಾಲಿಕಾರ, ರಾಮಪ್ಪ ಚಲವಾದಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts