More

    ‘ಬರ್ಕ್ಲಿ’ ಚಿತ್ರತಂಡದಿಂದ ಬಂತು ಇನ್ನೊಂದು ಹಾಡು …

    ಬೆಂಗಳೂರು: ಸಂತೋಷ್ ಬಾಲರಾಜ್ ಅಭಿನಯದಲ್ಲಿ ಸುಮಂತ್​ ಕ್ರಾಂತಿ’, ‘ಬರ್ಕ್ಲಿ’ ಎಂಬ ಚಿತ್ರ ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ, ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್​​ ಪ್ರೊಡಕ್ಷನ್​ ಕೆಲಸಗಳು ಸಹ ಮುಗಿಯುವ ಹಂತಕ್ಕೆ ಬಂದಿದೆ. ಈ ಮಧ್ಯೆ, ಚಿತ್ರದ ಲಿರಿಕಲ್​ ಹಾಡೊಂದು, ಇತ್ತೀಚೆಗೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿದೆ.

    ಇದನ್ನೂ ಓದಿ: ನಾಗೇಂದ್ರ ಪ್ರಸಾದ್​ ಮಗಳ ಅಭಿನಯದ ‘ಗಾಂಧಿ ಮತ್ತು ನೋಟು’ ಟ್ರೇಲರ್​ ಬಿಡುಗಡೆ

    ‘ಬಂಗಾರಿ ನನ್ನ ಬಂಗಾರಿ, ಐ ಲವ್​ ಯೂ ಅನ್ನೇ ಒಂದ್ಸಾರಿ …’ ಎಂಬ ಹಾಡು ಯೂಟ್ಯೂಬ್​ನ ಜಂಕಾರ್ ಮ್ಯೂಸಿಕ್ ಚಾನಲ್​ನ ಮೂಲಕ ಬಿಡುಗಡೆಯಾಗಿದೆ. ‘ಬಹದ್ದೂರ್’ ಚೇತನ್ ಅವರು ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈ ಹಾಡನ್ನು ರಾಜಸ್ತಾನದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ.

    ಈ ಹಿಂದೆ ದರ್ಶನ್​ ಅಭಿನಯದ ‘ಕರಿಯ’, ‘ಗಣಪ’, ‘ಕರಿಯ ೨’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್​, ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್​ನಲ್ಲಿ ‘ಬರ್ಕ್ಲಿ’ಯನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್​ಕಾಪಿ ಸಿದ್ಧವಾಗಲಿದ್ದು, ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

    ಇದನ್ನೂ ಓದಿ: ಪ್ರೈಂ ಮತ್ತು ನಮ್ಮ ಫ್ಲಿಕ್ಸ್​ ಒಟಿಟಿಯಲ್ಲಿ ‘ಜಿಲ್ಕಾ’ ಝಲಕ್ …

    ‘ಗಣಪ’, ‘ಕರಿಯ ೨’ ಚಿತ್ರಗಳಲ್ಲಿ ನಟಿಸಿದ್ದ ಬಾಲರಾಜ್​ ಅವರ ಮಗ ಸಂತೋಷ್​, ‘ಬರ್ಕ್ಲಿ’ ಚಿತ್ರದ ನಾಯಕರಾಗಿ ನಟಿಸಿದ್ದು, ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಟೇಕರ್ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೆ, ಚರಣ್​ರಾಜ್​, ಶ್ರುತಿ, ಬಲ ರಾಜವಾಡಿ, ಬುಲೆಟ್​ ಪ್ರಕಾಶ್​ ಮುಂತಾದವರು ನಟಿಸಿದ್ದಾರೆ.

    PHOTOS| ಮಾಜಿ ಸಿಎಂ HDK ಕುಟುಂಬದಲ್ಲಿ ಸಂಭ್ರಮ: ನಿಖಿಲ್​ ಪತ್ನಿ ರೇವತಿ ಸೀಮಂತದ ಫೋಟೋಗ್ಯಾಲರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts