ಬೆಂಗಳೂರು: ಸಂತೋಷ್ ಬಾಲರಾಜ್ ಅಭಿನಯದಲ್ಲಿ ಸುಮಂತ್ ಕ್ರಾಂತಿ’, ‘ಬರ್ಕ್ಲಿ’ ಎಂಬ ಚಿತ್ರ ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ, ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿಯುವ ಹಂತಕ್ಕೆ ಬಂದಿದೆ. ಈ ಮಧ್ಯೆ, ಚಿತ್ರದ ಲಿರಿಕಲ್ ಹಾಡೊಂದು, ಇತ್ತೀಚೆಗೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿದೆ.
ಇದನ್ನೂ ಓದಿ: ನಾಗೇಂದ್ರ ಪ್ರಸಾದ್ ಮಗಳ ಅಭಿನಯದ ‘ಗಾಂಧಿ ಮತ್ತು ನೋಟು’ ಟ್ರೇಲರ್ ಬಿಡುಗಡೆ
‘ಬಂಗಾರಿ ನನ್ನ ಬಂಗಾರಿ, ಐ ಲವ್ ಯೂ ಅನ್ನೇ ಒಂದ್ಸಾರಿ …’ ಎಂಬ ಹಾಡು ಯೂಟ್ಯೂಬ್ನ ಜಂಕಾರ್ ಮ್ಯೂಸಿಕ್ ಚಾನಲ್ನ ಮೂಲಕ ಬಿಡುಗಡೆಯಾಗಿದೆ. ‘ಬಹದ್ದೂರ್’ ಚೇತನ್ ಅವರು ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈ ಹಾಡನ್ನು ರಾಜಸ್ತಾನದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಹಿಂದೆ ದರ್ಶನ್ ಅಭಿನಯದ ‘ಕರಿಯ’, ‘ಗಣಪ’, ‘ಕರಿಯ ೨’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್, ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ‘ಬರ್ಕ್ಲಿ’ಯನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ಕಾಪಿ ಸಿದ್ಧವಾಗಲಿದ್ದು, ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಪ್ರೈಂ ಮತ್ತು ನಮ್ಮ ಫ್ಲಿಕ್ಸ್ ಒಟಿಟಿಯಲ್ಲಿ ‘ಜಿಲ್ಕಾ’ ಝಲಕ್ …
‘ಗಣಪ’, ‘ಕರಿಯ ೨’ ಚಿತ್ರಗಳಲ್ಲಿ ನಟಿಸಿದ್ದ ಬಾಲರಾಜ್ ಅವರ ಮಗ ಸಂತೋಷ್, ‘ಬರ್ಕ್ಲಿ’ ಚಿತ್ರದ ನಾಯಕರಾಗಿ ನಟಿಸಿದ್ದು, ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಟೇಕರ್ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೆ, ಚರಣ್ರಾಜ್, ಶ್ರುತಿ, ಬಲ ರಾಜವಾಡಿ, ಬುಲೆಟ್ ಪ್ರಕಾಶ್ ಮುಂತಾದವರು ನಟಿಸಿದ್ದಾರೆ.
PHOTOS| ಮಾಜಿ ಸಿಎಂ HDK ಕುಟುಂಬದಲ್ಲಿ ಸಂಭ್ರಮ: ನಿಖಿಲ್ ಪತ್ನಿ ರೇವತಿ ಸೀಮಂತದ ಫೋಟೋಗ್ಯಾಲರಿ