More

    ‘ನಮ್ಮ ಮೆಟ್ರೋ’ದಲ್ಲಿ ಕಿರುಕುಳ: ಯುವತಿ ಕಿರುಚುತ್ತಿದ್ದರೂ ಕ್ಯಾರೇ ಎನ್ನದ ಸಹ ಪ್ರಯಾಣಿಕರು

    ಬೆಂಗಳೂರು: ಭಾರತದ ಐಟಿ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಜನನಿಬಿಡ ಮೆಟ್ರೋದಲ್ಲಿ ಯುವತಿಯೋರ್ವಳಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಲಾಗಿದೆ. ಆತಂಕಕಾರಿ ಸಂಗತಿಯೆಂದರೆ ಯುವತಿ ಅಸಮಾಧಾನ ವ್ಯಕ್ತಪಡಿಸಿ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರೂ ಸಹ ಪ್ರಯಾಣಿಕರು ಕ್ಯಾರೆ ಎನ್ನಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಿರುಕುಳ ಎಸಗಿದ ವ್ಯಕ್ತಿ ಗುಂಪಿನಲ್ಲಿ ಸಲೀಸಾಗಿ ಕಣ್ಮರೆಯಾಗಿದ್ದಾನೆ. ಸಂತ್ರಸ್ತೆಯ ಸ್ನೇಹಿತರು ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. 

    ಈ ಘಟನೆಯನ್ನು ಹಂಚಿಕೊಂಡಿರುವ ಆಕೆಯ ಸ್ನೇಹಿತರು, ಕಾಲೇಜಿಗೆ ಹೋಗಲು ಬಸ್ ಬಳಸಲಾಗುತ್ತಿತ್ತು. ಆದರೆ ಸೋಮವಾರ (ನವೆಂಬರ್ 20) ಮೆಟ್ರೋದಲ್ಲಿ ಪ್ರಯಾಣಿಸಲಾಯಿತು. ಮೆಜೆಸ್ಟಿಕ್‌ನಲ್ಲಿ ಬೆಳಗ್ಗೆ 8.50ರ ಸುಮಾರಿಗೆ ಮೆಟ್ರೋದಲ್ಲಿ ಸಾಕಷ್ಟು ಜನಸಂದಣಿ ಇತ್ತು. ಅಲ್ಲಿ ತಳ್ಳಾಟ, ನೂಕಾಟ ನಡೆಯುತ್ತಿತ್ತು. 

    ಜನಸಂದಣಿ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಮಹಿಳೆ ಹೆಚ್ಚಿನ ಸಂಖ್ಯೆಯ ಜನರನ್ನು ರೈಲಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು “ಸ್ವಲ್ಪ ಸಮಯದ ನಂತರ, ಸ್ನೇಹಿತೆಗೆ ತುಂಬಾ ಅನಾನುಕೂಲವಾಯಿತು. ಕೆಂಪು ಅಂಗಿಯ ವ್ಯಕ್ತಿಯೊಬ್ಬನು ತನ್ನ ಹಿಂದೆ ನಿಂತಿದ್ದಾನೆ ಎಂದು ಅವಳು ಅರಿತುಕೊಂಡಳು. ಅವನು ಅವಳನ್ನು ಮುಟ್ಟುತ್ತಿದ್ದನು. ಅವನ ಉಗುರುಗಳು ಅವಳನ್ನು ಚುಚ್ಚುತ್ತಿದ್ದವು. ಆರಂಭದಲ್ಲಿ ಏನಾಗುತ್ತಿದೆ ಎಂದು ಆಕೆಗೆ ತಿಳಿದಿರಲಿಲ್ಲ, ಅವಳು ತಿರುಗಿ ನೋಡಿದಾಗ, ಒಬ್ಬ ವ್ಯಕ್ತಿ ತನ್ನ ಹಿಂದೆ ನಿಂತಿದ್ದನು. ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದಳು. ಆದರೆ ಜನರು ಅವಳಿಗೆ ಸಹಾಯ ಮಾಡಲಿಲ್ಲ, ಇದರ ಲಾಭ ಪಡೆದ ವ್ಯಕ್ತಿ ಆ ಗುಂಪಿನಲ್ಲಿ ಮಾಯವಾದನು. 

    'ನಮ್ಮ ಮೆಟ್ರೋ'ದಲ್ಲಿ ಕಿರುಕುಳ: ಯುವತಿ ಕಿರುಚುತ್ತಿದ್ದರೂ ಕ್ಯಾರೇ ಎನ್ನದ ಸಹ ಪ್ರಯಾಣಿಕರು

    ಈ ವಿಷಯದಲ್ಲಿ ಹೇಗೆ ದೂರು ನೀಡಬೇಕೆಂದು ಯಾರಾದರೂ ನನಗೆ ಹೇಳಬಹುದೇ? ಸಿಸಿಟಿವಿ ಕ್ಯಾಮೆರಾಗಳಿವೆಯೇ ? ನಾನು ದೃಶ್ಯವನ್ನು ಎಲ್ಲಿ ನೋಡಬಹುದು? ದಯವಿಟ್ಟು ನನಗೆ ಸಹಾಯ ಮಾಡಿ” ಎಂದು ಯುವತಿಯ ಸ್ನೇಹಿತರು ಪ್ರಶ್ನಿಸಿದ್ದಾರೆ.

    ಅದಕ್ಕೆ ಬಳಕೆದಾರರೊಬ್ಬರು “ನಾನು ಈ ಮೆಟ್ರೋದಲ್ಲಿ ಕೆಲಸ ಮಾಡುತ್ತೇನೆ, ನೀವು ದೂರು ನೀಡಿದರೆ, ಮೆಟ್ರೋ ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲು ಆಗಿರುವುದರಿಂದ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು @cpronammametro ಟ್ಯಾಗ್ ಮಾಡುವ ಮೂಲಕ ದೂರನ್ನು ಟ್ವೀಟ್ ಮಾಡಿ. ನಂತರ ಯಾರಾದರೂ ಇಂತಹ ಘಟನೆ ಎದುರಿಸಿದರೆ, ದಯವಿಟ್ಟು ನಿಲ್ದಾಣದ ವ್ಯವಸ್ಥಾಪಕರನ್ನು ಸಂಪರ್ಕಿಸಿ, ಅವರು ಸಹಾಯ ಮಾಡುತ್ತಾರೆ” ಎಂದು ತಿಳಿಸಿದ್ದಾರೆ.
    ಮತ್ತೋರ್ವ ಬಳಕೆದಾರರು, “ಸಿಸಿಟಿವಿ ಲಭ್ಯವಿದೆ, ಆದರೆ ನೀವು ಅದನ್ನು ಸುಲಭವಾಗಿ ಪಡೆಯಲಾಗುವುದಿಲ್ಲ. ನೀವು CPRO (ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ) ಗೆ ದೂರು ನೀಡಿ” ಎಂದಿದ್ದಾರೆ. ಅನೇಕ ಬಳಕೆದಾರರು ಈ ಉಪಕ್ರಮವನ್ನು ಮೆಚ್ಚಿದ್ದು, ಇತರರು ನಿಮ್ಮ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆ; 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts