ಬೆಂಗಳೂರು: ದೆಹಲಿಯಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಹಾಗೂ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಜನನಿಬಿಡ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ಸ್ಟೇಷನ್ಗಳಲ್ಲಿ ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ತಂಡದೊಂದಿಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್ಗಳು, ಲಾಡ್ಜ್ಗಳು, ಅನುಮಾನಸ್ಪದ ವಾಹನಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಇಂದು(ಶನಿವಾರ) ಏಕಕಾಲಕ್ಕೆ 6 ಡಿಸಿಪಿ, 10 ಎಸಿಪಿ, 25 ಇನ್ಸ್ಪೆಕ್ಟರ್ಗಳ ತಂಡದಿಂದ ಪರಿಶೀಲನೆ ನಡೆಸುತ್ತಿದೆ.
ಅನುಮಾನಸ್ಪದ ವಸ್ತುಗಳು, ಅನುಮಾನಸ್ಪದ ವ್ಯಕ್ತಿಗಳನ್ನ ಕಂಡ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಎರಡು ದಿನದ ಹಿಂದೆ ದೆಹಲಿಯಲ್ಲಿ ಹರ್ಕತ್ ಉಲ್ ಅನ್ಸರ್ ಸಂಘಟನೆಯ ಉಗ್ರರರ ಬಂಧನವಾಗಿತ್ತು.