ಬೆಂಗಳೂರು: ಮನೆಯ ಕಿಟಕಿಯಿಂದ ಹೋಗಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಹಣ ವಂಚನೆ ಆರೋಪಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ನಗರದ ವಿದ್ಯಾರಣ್ಯಪುರದಲ್ಲಿ ಶುಕ್ರವಾರ (ಫೆ. 26) ನಡೆದಿದೆ.
ಸಿದ್ದಲಿಂಗ ಸ್ವಾಮಿ ಮೃತಪಟ್ಟ ಆರೋಪಿ. ಬಿಡಿಎ ನಕಲಿ ಸೀಲ್, ಲೆಟರ್ ಹೆಡ್ ಬಳಸಿ 16 ಲಕ್ಷ ವಂಚಿಸಿದ್ದ ಆರೋಪಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನಕ್ಕೆ ಒಳಗಾಗಿದ್ದ ಆರೋಪಿಯನ್ನು ಇಂದು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಗಿತ್ತು.
ಇದನ್ನೂ ಓದಿರಿ: ಮಮತಾ ಮಾತ್ರ ಏಕೆ, ನಾನೂ ಬಿಡ್ತೇನೆ ಅಂತ ಸ್ಕೂಟರ್ ಏರಿದ ಬಿಜೆಪಿ ನಾಯಕಿ
ಈ ವೇಳೆ ಹೆಂಡತಿ ಮುಖ ನೋಡಿ ಮುಜುಗರಕ್ಕೆ ಒಳಗಾದ ಆರೋಪಿ ಸಿದ್ಧಲಿಂಗ ಮನೆಯ ಕಿಟಕಿಯಿಂದ ಹೋಗಿ ಕಟ್ಟಡದ ಮೇಲಿಂದ ಜಿಗಿದಿದ್ದ. ಇದರ ಪರಿಣಾಮ ತೀವ್ರ ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
ಪೆಟ್ರೋಲ್ ದರ ಇಳಿಕೆ ಬಯಸುವುದಾದ್ರೆ ಮೋದಿಗೆ ಮತ್ತೆ ಮತ ಹಾಕಬೇಡಿ: ಬಿಲ್ ಹಿಂದಿನ ಸತ್ಯಾಂಶ ಬಯಲು!
ಬೆಳಗಾವಿ, ಮಸ್ಕಿ, ಬಸವಕಲ್ಯಾಣ, ಸಿಂದಗಿ ಉಪ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ