ಬೆಂಗಳೂರು: ಎಸ್ಐಟಿ ವಿಚಾರಣೆಗೆ ಬರುವ ವೇಳೆಯೂ ಮಾಜಿ ಸಚಿವ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಆರೋಪಿಗಳು ಮಾಸ್ಟರ್ ಪ್ಲಾನ್ ಮಾಡಿಕೊಂಡೆ ಬಂದಿದ್ದಾರೆ.
ಆರೋಪಿಗಳಾದ ಶ್ರವಣ್ ಮತ್ತು ನರೇಶ್, ಎಲ್ಲಿಯೂ ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಬಹಿರಂಗಗೊಳಿಸಿಲ್ಲ. ಇಂದು ಮೆಜೆಸ್ಟಿಕ್ನಲ್ಲಿ ಟ್ಯಾಕ್ಸಿ ಕ್ಯಾಬ್ ಹತ್ತಿದ ಆರೋಪಿಗಳು, ಆಡುಗೋಡಿ ಟೆಕ್ನಿಕಲ್ ಸೆಂಟರ್ಗೆ ಬಿಡುವಂತೆ ಕ್ಯಾಬ್ ಚಾಲಕನಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೆಜೆಸ್ಟಿಕ್ನಿಂದ ಆಡುಗೋಡಿಗೆ ಇಳಿಸಿದ್ದಕ್ಕೆ 1 ಸಾವಿರ ರೂ. ಹಣವನ್ನು ಸಹ ಆರೋಪಿಗಳು ನೀಡಿದ್ದಾರೆ.
ಕ್ಯಾಬ್ ಬುಕ್ ಮಾಡಿದ್ರೆ ಮಾತ್ರ ಕರೆದುಕೊಂಡು ಹೋಗ್ತೇನೆ ಸರ್, ಇಲ್ಲದಿದ್ದರೆ ಪೊಲೀಸರು ಹಿಡಿತಾರೆ ಎಂದು ಚಾಲಕ ಹೇಳಿದ್ದಾನೆ. ನಾವು ಹೇಳಿಕೊಳ್ಳುತ್ತೇವೆ ನಡಿಯಪ್ಪ ಎಂದ ಬಳಿಕ ನರೇಶ್ ಹಾಗೂ ಶ್ರವಣ್ನನ್ನು ಕರೆತಂದು ಆಡುಗೋಡಿ ಟೆಕ್ನಿಕಲ್ ಕೇಂದ್ರಕ್ಕೆ ಬಿಟ್ಟಿದ್ದಾಗಿ ಕ್ಯಾಬ್ ಚಾಲಕ ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ವೈರಲ್ ಆಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈ ಕೇಸ್ನ ಸೂತ್ರಧಾರಿಗಳೆಂದೇ ಹೇಳಲಾದ ಬಿ.ಎಂ.ನರೇಶ್ ಗೌಡ ಮತ್ತು ಶ್ರವಣ್ ಇವರಿಬ್ಬರು ಇಂದು ಎಸ್ಐಟಿ(ವಿಶೇಷ ತನಿಖಾ ತಂಡ) ಮುಂದೆ ಹಾಜರಾಗಿದ್ದಾರೆ. ನರೇಶ್ ಮತ್ತು ಶ್ರವಣ್ಗೆ ಜೂ.8ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕ ನಾಲ್ಕು ದಿನಕ್ಕೆ ಅಂದರೆ ಜೂ.12ರಂದು ತಮ್ಮ ವಕೀಲರೊಂದಿಗೆ ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಸಿಸಿಬಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸುತ್ತಿದ್ದಾರೆ.
ಇತ್ತ ನರೇಶ್ ಮತ್ತು ಶ್ರವಣ್ನನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳು ಸ್ವತಂತ್ರರು ಎಂದು ಕೋರ್ಟ್ ಹೇಳಿತ್ತು. ಅವಶ್ಯವಿದ್ದಲ್ಲಿ ಬಂಧಿಸುವ ಸಾಧ್ಯತೆ ಇದ್ದು, ಶ್ರವಣ್ ಮತ್ತು ನರೇಶ್ ಕಥೆ ಏನಾಗುತ್ತೆ ಎಂಬ ಕುತೂಹಲ ಹೆಚ್ಚಿದೆ. ಅಶ್ಲೀಲ ಸಿಡಿ ಬಯಲಾಗುತ್ತಿದ್ದಂತೆ ನರೇಶ್ ಮತ್ತು ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ ಮತ್ತು ಬ್ಯ್ಲಾಕ್ಮೇಲ್ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ದಿಗ್ವಿಜಯ ನ್ಯೂಸ್)
ಜಾರಕಿಹೊಳಿ ಸಿಡಿ ಕೇಸ್: ತನಿಖಾಧಿಕಾರಿಗಳ ಮುಂದೆ ನರೇಶ್ಗೌಡ, ಶ್ರವಣ್ ಹಾಜರ್! ಮುಂದೇನಾಗುತ್ತೆ?
ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ