ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಹೊಸ ಫೋಟೋಗಳು ಹೊರಬಂದಿದ್ದು, ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುವಾಗ ಮುಖವಾಡ ಮತ್ತು ಟೋಪಿ ಇಲ್ಲದೆ ಚಿತ್ರಿಸಲಾಗಿದೆ.
ಇದನ್ನೂ ಓದಿ: ಬಾಂಬ್ ದಾಳಿಕೋರರ ಬಂಧನವಾಗಲಿ: ಮಂಡ್ಯದಲ್ಲಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ
ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನರು ಗಾಯಗೊಂಡಿದ್ದರು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಂಡಿದ್ದು, ಈ ಹಿಂದೆ ಶಂಕಿತ ಬಾಂಬರ್ ಕೆಫೆಗೆ ಪ್ರವೇಶಿಸಿದಾಗ ಕ್ಯಾಪ್, ಮುಖವಾಡ ಮತ್ತು ಕನ್ನಡಕವನ್ನು ಧರಿಸಿರುವ ಚಿತ್ರವನ್ನು ಸಾರ್ವಜಿಕವಾಗಿ ಹಂಚಿಕೊಂಡಿತ್ತು.
ಪ್ರಕರಣದ ತನಿಖೆ ಚುರುಕುಗಗೊಳಿಸಿದ ಎನ್ಐಎ ತಂಡ ಇತ್ತೀಚೆಗೆ ಬಳ್ಳಾರಿ ನಗರಕ್ಕೆ ಭೇಟಿ ನೀಡಿತ್ತು. ಎರಡು ವಾಹನಗಳಲ್ಲಿ 10 ಕ್ಕೂ ಹೆಚ್ಚು ಎನ್ಐಎ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ಸ್ಫೋಟದ ನಂತರ ಬಾಂಬರ್ ಬೆಂಗಳೂರಿನಿಂದ ತುಮಕೂರಿಗೆ ಪ್ರಯಾಣಿಸಿ, ಅಂತಿಮವಾಗಿ ಬಳ್ಳಾರಿ ನಗರವನ್ನು ತಲುಪಿದ್ದಾನೆ ಎಂಬುದನ್ನು ಎನ್ಐಎ ಪತ್ತೆಹಚ್ಚಿದೆ ಎನ್ನಲಾಗಿದೆ.
Images of The Rameshwaram Cafe bomber with & without mask while he was traveling in the BMTC Volvo bus in Bengaluru. #RameshwaramCafeBlast pic.twitter.com/4GrbFHQ1pl
— Girish Bharadwaj (@Girishvhp) March 7, 2024
ಮತ್ತೊಂದು ಎನ್ಐಎ ತಂಡ ತುಮಕೂರು ಬಸ್ ನಿಲ್ದಾಣವನ್ನು ಪರಿಶೋಧಿಸಿದ್ದು, ಅಲ್ಲಿ ಶಂಕಿತ ಕಾಣಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಗಳು ಆಂಧ್ರಪ್ರದೇಶದ ಮಂತ್ರಾಲಯದಿಂದ ಕರಾವಳಿ ಕರ್ನಾಟಕದ ಗೋಕರ್ಣ ನಗರಕ್ಕೆ ಬಸ್ ಹತ್ತಿದ್ದರು ಎಂದು ಬಳ್ಳಾರಿಯಲ್ಲಿ ಸಂಗ್ರಹಿಸಿದ ಮಾಹಿತಿಯಿಂದ ತಿಳಿದುಬಂದಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಈ ಹಿಂದೆ ಬಾಂಬ್ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಲೀಪರ್ ಸೆಲ್ಗಳ ಬೆಂಬಲದೊಂದಿಗೆ ವಿದೇಶಕ್ಕೆ ಪರಾರಿಯಾಗುವ ಯೋಜನೆ ಇದೆ. ಶಂಕಿತನನ್ನು ಬಂಧಿಸಲು ಎನ್ಐಎ ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ತುಮಕೂರಿಗೆ ಮತ್ತು ನಂತರ ಬಳ್ಳಾರಿಗೆ ಬಸ್ ಹತ್ತುವ ಮುನ್ನ ಬಾಂಬರ್ ಬೆಂಗಳೂರಿನ ಸುಜಾತಾ ವೃತ್ತಕ್ಕೆ ಭೇಟಿ ನೀಡಿದ್ದ ಎಂದು ಮೂಲಗಳು ತಿಳಿಸಿವೆ.
CCTV footage of #RameshwaramCafe blast.
Be it Taj Hotel or Rameshwaram Cafe,
only constant thing is Congress Govt. pic.twitter.com/8UymrGznfG— Shilpa (@shilpa_cn) March 1, 2024
ಎನ್ಐಎಗೆ ಮಹತ್ವದ ಸುಳಿವು: ತನಿಖೆಯ ನೇತೃತ್ವ ವಹಿಸಿರುವ ಎನ್ಐಎ ಬುಧವಾರ ಶಂಕಿತನ ಫೋಟೋವನ್ನು ಬಿಡುಗಡೆ ಮಾಡಿದ್ದು, ಆತನ ಬಗ್ಗೆ ಮಾಹಿತಿ ಅಥವಾ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ. ಗೃಹ ಸಚಿವ ಜಿ.ಪರಮೇಶ್ವರ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಬಹಿರಂಗಪಡಿಸಿದ್ದು, ಎನ್ಐಎ ಮತ್ತು ಬೆಂಗಳೂರು ಪೊಲೀಸ್ನ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಭಾಗ ಜಂಟಿ ತನಿಖೆಗೆ ಒತ್ತು ನೀಡಿದೆ. ಕೆಫೆಯನ್ನು ಮಾರ್ಚ್ 8 ರಂದು ಮತ್ತೆ ತೆರೆಯಲು ನಿರ್ಧರಿಸಲಾಗಿದೆ.