More

    ಇಂಗ್ಲೆಂಡ್ ಲಯನ್ಸ್ ವಿರುದ್ಧದ ಚತುರ್ದಿನ ಟೆಸ್ಟ್‌ಗೆ ಅಭಿಮನ್ಯು ನಾಯಕ

    ಮುಂಬೈ: ಪ್ರವಾಸಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಜನವರಿ 17 ರಿಂದ 20ರವರೆಗೆ ಅಹಮದಬಾದ್‌ನ ನರೇಂದ್ರ ಮೋದಿ ‘ಬಿ’ ಕ್ರೀಡಾಂಗಣಲ್ಲಿ ನಡೆಯಲಿರುವ ಚತುರ್ದಿನ ಟೆಸ್ಟ್ ಪಂದ್ಯಕ್ಕೆ 13 ಆಟಗಾರರ ಭಾರತ ‘ಎ’ ತಂಡ ಆಯ್ಕೆ ಮಾಡಲಾಗಿದ್ದು, ಬಂಗಾಳ ಬ್ಯಾಟರ್ ಅಭಿಮನ್ಯು ಈಶ್ವರನ್ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ.

    ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ತಂಡದಲ್ಲಿರುವ ಏಕೈಕ ಕನ್ನಡಿಗ ಎನಿಸಿದ್ದಾರೆ. ಚತುರ್ದಿನ ಪಂದ್ಯಕ್ಕೂ ಮುನ್ನ ಎರಡು ತಂಡಗಳು ಅಹಮದಬಾದ್‌ನ ನರೇಂದ್ರ ಮೋದಿ ‘ಬಿ’ ಕ್ರೀಡಾಂಗಣಲ್ಲಿ 2 ದಿನಗಳ ಅಭ್ಯಾಸ ಪಂದ್ಯ ಆಡಲಿವೆ. ದ.ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡವನ್ನು ವಿಕೆಟ್ ಕೀಪರ್-ಬ್ಯಾಟರ್ ಕೆಎಸ್ ಭರತ್ ಮುನ್ನಡೆಸಿದ್ದರು.ಭಾರತ ‘ಎ’ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟೀದಾರ್, ರ್ಸ್ರಾಜ್ ಖಾನ್, ಪ್ರದೋಶ್ ರಜನ್ ಪೌಲ್, ಕೆಎಸ್ ಭರತ್ (ವಿ.ಕೀ), ಮನವ್ ಸುಥರ್, ಪುಲ್ಕೀತ್ ನಾರಂಗ್, ನವದೀಪ್ ಸೈನಿ, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಧ್ರುವ್ ಜುರೆಲ್ (ವಿ.ಕೀ), ಆಕಾಶ್ ದೀಪ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts