More

    ಚುನಾವಣೆ ನಂತರ ಪಕ್ಷ ಬದಲಿಸಿದ ಶಾಸಕನನ್ನು ಅನರ್ಹಗೊಳಿಸಲು ಮನವಿ

    ಕೊಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಗೆದ್ದು, ಇತ್ತೀಚೆಗೆ ತೃಣಮೂಲ ಕಾಂಗ್ರೆಸ್​(ಟಿಎಂಸಿ) ಸೇರಿದ ಶಾಸಕ ಬಿಸ್ವಜಿತ್​ ದಾಸ್​ ಅವರನ್ನು ಅನರ್ಹಗೊಳಿಸಬೇಕೆಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆಗ್ರಹಿಸಿದ್ದಾರೆ. ಈ ಬಗ್ಗೆ ಅರ್ಜಿ ಸಲ್ಲಿಸಿ ರಾಜ್ಯದ ವಿಧಾನಸಭಾ ಸಭಾಧ್ಯಕ್ಷರಿಗೆ ಅಧಿಕಾರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

    ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಸ್ವಜಿತ್​ ದಾಸ್​ ಅವರು ಬಂಗಾಳದ ಬಾಗ್ಡಾ ಮೀಸಲು ಕ್ಷೇತ್ರದಿಂದ ಬಿಜೆಪಿಯ ಪರವಾಗಿ ಸ್ಪರ್ಧಿಸಿ, ಟಿಎಂಸಿಯ ಪಾರಿತೋಶ್​ ಕುಮಾರ್​ ಸಹ ವಿರುದ್ಧ 9,792 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ರಾಜ್ಯದ ಚುನಾವಣೆಯಲ್ಲಿ ಟಿಎಂಸಿ ಭಾರೀ ಬಹುಮತ ಪಡೆದು ಅಧಿಕಾರ ವಹಿಸಿಕೊಂಡ ನಂತರ, ದಾಸ್​ ಅವರು ಬಿಜೆಪಿ ತ್ಯಜಿಸಿ ಟಿಎಂಸಿ ಸೇರ್ಪಡೆಯಾಗಿದ್ದರು. (ಏಜೆನ್ಸೀಸ್)

    ಪೆಗಾಸಸ್​ ಪ್ರಕರಣ: ಕೋರ್ಟ್​ ಮುಂದೆ ಹೇಳಿಕೆ ಸಲ್ಲಿವುದಿಲ್ಲ ಎಂದ ಸರ್ಕಾರ!

    ಗುಜರಾತ್​ನ 17ನೇ ಸಿಎಂ ಆಗಿ ಭೂಪೇಂದ್ರ ಪಟೇಲ್​​ ಪ್ರಮಾಣ ವಚನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts