More

    ಉಚಿತ ಶಿಬಿರದ ಸದ್ಬಳಕೆಯಾಗಲಿ

    ಹುಕ್ಕೇರಿ: ಪುಣ್ಯತಿಥಿ ಆಚರಣೆ ಸಮಾಜಮುಖಿಯನ್ನಾಗಿಸಲು ಉಚಿತ ಶಿಬಿರಗಳಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರ್ಮನ್ ಪವನ ಕತ್ತಿ ಹೇಳಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ದಿ.ವಿಶ್ವನಾಥ ಕತ್ತಿ ಅವರ 39ನೇ ಪುಣ್ಯತಿಥಿ ನಿಮಿತ್ತ ವಿಶ್ವರಾಜ ರಕ್ತ ತಪಾಸಣೆ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ರಕ್ತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಉಚಿತ ಶಿಬಿರದಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ತಪ್ಪುತ್ತದೆ. ಎಲ್ಲರೂ ಉಚಿತ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ವೈದ್ಯರಾದ ಮೋಹನ ಮುನ್ನೋಳಿ, ಪಿ.ವಿ.ಮನ್ನೂರ, ಆರ್.ಎಂ.ಕತ್ತಿ, ಪಿ.ಎಂ.ಪಾಟೀಲ, ಭಾಗ್ಯಶ್ರೀ ಜಾಗನೂರ ಅವರಿಂದ ರಕ್ತ ತಪಾಸಣಾ ಶಿಬಿರ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ನಾವಿ, ಮುಖಂಡರಾದ ಆರ್. ಟಿ.ಶಿರಾಳಕರ, ಮುರಗೇಶ ಕತ್ತಿ, ಎ.ಡಿ.ಖೆಮಲಾಪುರೆ, ದೀಲಿಪ್ ವಾಳಿಖಿಂಡಿ, ದೀಪಕ ಮುರಗಾಲಿ ಸುಧೀರ ಕತ್ತಿ, ರವೀಂದ್ರ ಖೆಮಲಾಪುರೆ, ಅಶೋಕ ಬೆಲ್ಲದ, ಸಂಗಮೇಶ ಕತ್ತಿ, ವಿನಾಯಕ ಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts