More

    ಬಿಡಿಎ ಸ್ವಾಧೀನದ ಅಕ್ರಮ ಮನೆ, ಸೈಟ್ ಸಕ್ರಮಕ್ಕೆ ಕಾಯ್ದೆ ತಿದ್ದುಪಡಿಗೆ ತೀರ್ಮಾನ ತೆಗೆದುಕೊಂಡಿದೆ ಸಚಿವ ಸಂಪುಟದ ಉಪ ಸಮಿತಿ ತೀರ್ಮಾನ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಬಡಾವಣೆಗಳಲ್ಲಿನ ಅಕ್ರಮ ಮನೆ ಮತ್ತು ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.

    ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆ ಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಕ್ರಮಕ್ಕೆ ಪೂರಕವಾಗಿ ಬಿಡಿಎ ಕಾಯ್ದೆ 1976ಕ್ಕೆ ತಿದ್ದುಪಡಿ ತರುವ ಬಗ್ಗೆ ರ್ಚಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗಗಳನ್ನು ಭೂ ಮಾಲೀಕರು ಪರಿಹಾರದ ಮೊತ್ತ ಪಡೆದ ನಂತರವೂ ಬೇರೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರು. ಅಂತಹ ಜಾಗಗಳಲ್ಲಿ ಈಗ ಮನೆಗಳನ್ನು ನಿರ್ವಿುಸಿದ್ದು, ಅವುಗಳನ್ನು ಸಕ್ರಮಗೊಳಿಸುವ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇತ್ತು.

    ಒಂದು ಬಾರಿ ಸೂತ್ರ ಅನ್ವಯ: ಈ ರೀತಿಯ 5,000 ಎಕರೆ ಪ್ರದೇಶದ 75,000 ನಿವೇಶನಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ವಿುಸಿಕೊಂಡಿದ್ದು, ಇಷ್ಟೂ ಮನೆಗಳನ್ನು ಸಕ್ರಮಗೊಳಿಸುವ ಉದ್ದೇಶ ಇದೆ. ಇದಕ್ಕೆ ಒಂದು ಬಾರಿಗೆ ಅನ್ವಯವಾಗುವ ಹಾಗೆ ಮಾರ್ಗದರ್ಶಿ ದರದ ಮೇಲೆ ಇಂತಿಷ್ಟು ಹಣ ಪಡೆದು ಮಾಡುವ ಬಗ್ಗೆ ಸಭೆ ರ್ಚಚಿಸಿದೆ.

    12 ವರ್ಷಗಳ ಹಿಂದೆ ಪಡೆದ ನಿವೇಶನದಾರರಿಗೆ ಅನ್ವಯವಾಗುವ ಹಾಗೆ ಸಕ್ರಮ ಮಾಡಬೇಕೆಂದು ಕಾನೂನು ಇಲಾಖೆ ಸಲಹೆ ನೀಡಿದೆ. ಹೀಗೆ ಗಡುವು ವಿಧಿಸುವುದರ ಬದಲು ಇತ್ತೀಚಿನವರೆಗೆ ಯಾರ್ಯಾರು ಮನೆ ಕಟ್ಟಿಕೊಂಡಿದ್ದಾರೋ ಅಂತಹವರ ಮನೆಗಳನ್ನೂ ಸಕ್ರಮ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ತೀರ್ವನದ ಪ್ರಕಾರ ಬಿಡಿಎ ಸ್ವಾಧೀನದಲ್ಲಿರುವ ಹಾಗೂ ಒತ್ತುವರಿಯಾಗಿರುವ ಬಗ್ಗೆ ಲ್ಯಾಂಡ್ ಆಡಿಟ್ ನಡೆಸಿದೆ. ಇದುವರೆಗೆ ಬಿಡಿಎ 64 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ ಮಾಹಿತಿಯನ್ನು ಸಭೆ ಪಡೆಯಿತು.

    ಸಕ್ರಮಕ್ಕೆ ಗರಿಷ್ಠ ಮಿತಿ: ಒಂದೊಂದು ಅಳತೆಯ ನಿವೇಶನಗಳಿಗೆ ಒಂದೊಂದು ರೀತಿ ದಂಡಕ್ಕೆ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. 120100 ಅಳತೆವರೆಗಿನ ನಿವೇಶನಗಳು ಮತ್ತು ಅವುಗಳಲ್ಲಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಬಹುದೆಂದು ಅಧಿಕಾರಿಗಳು ಸಲಹೆ ನೀಡಿದ್ದು, ಬಹುತೇಕ ಒಪ್ಪಿಗೆ ದೊರೆತಿದೆ ಎಂದು ಮೂಲಗಳು ಹೇಳಿವೆ.

    ಕಟ್ಟಡ ತೆರವು ಸಾಧ್ಯವಾಗಿರಲಿಲ್ಲ: ಹಲವು ವರ್ಷಗಳಿಂದ ಬಿಡಿಎ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವ ನಾಗರಿಕರು ಅತಂತ್ರ ಸ್ಥಿತಿಯಲ್ಲಿದ್ದು, ಅಂತಹವರಿಗೆ ಕಾನೂನು ತಿದ್ದುಪಡಿಯಿಂದ ಅನುಕೂಲ ಆಗಲಿದೆ. ಬಿಡಿಎ ಕೂಡ ಸ್ವಾಧೀನಕ್ಕೆ ಹಲವು ರೀತಿಯ ಪ್ರಯತ್ನ ನಡೆಸಿದ್ದರೂ ಕಟ್ಟಡಗಳ ನಿರ್ವಣದ ನಂತರ ಅವುಗಳನ್ನು ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುಮ್ಮನೆ ಬಿಡುವುದರ ಬದಲು, ಇಂತಿಷ್ಟು ಶುಲ್ಕ ಅಥವಾ ದಂಡ ವಿಧಿಸಿ ಮಾಲೀಕತ್ವ ಬಿಟ್ಟುಕೊಡುವುದೇ ಉತ್ತಮ ಎನ್ನುವ ಕಾರಣಕ್ಕೆ ಸಮಿತಿ ಈ ತೀರ್ಮಾನಕ್ಕೆ ಬಂದಿದೆ.

    ವಸತಿ ಸಚಿವ ವಿ. ಸೋಮಣ್ಣ ಸಭೆಯಲ್ಲಿದ್ದರು. ನಗರಾಭಿವೃದ್ಧಿ ಇಲಾಖೆ ಮತ್ತು ಬಿಡಿಎ ಅಧಿಕಾರಿಗಳು ಹಾಜರಿದ್ದು ಮಾಹಿತಿ ನೀಡಿದರು.

    ರಾಜ್ಯರಾಜಧಾನಿಯ ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸೋಂಕಿತರು: ಹಾಗಾದರೆ ಬೆಂಗಳೂರಿನಲ್ಲಿರುವ ಹಾಟ್​ಸ್ಪಾಟ್ ವಾರ್ಡ್​ಗಳ ವಿವರ ಇಲ್ಲಿದೆ ಓದಿ..

    ಆಹಾರ ನೆರವಿಗೆ ಸಹಾಯ ಸೇತುವೆ ಆ್ಯಪ್ ಅಭಿವೃದ್ಧಿ ಪಡಿಸಿದೆ ಬಿಬಿಎಂಪಿ- ಇದು ಹೇಗೆ ಕೆಲಸ ಮಾಡುತ್ತೆ ಎಂಬ ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts