ಬೆಂಗಳೂರು: ಭಾನುವಾರ ನಡೆದ ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆಯಲ್ಲಿ ಮಾತನಾಡಿದ ಸುದೀಪ್, “ನಾನು ಯಾವ ಗಳಿಗೆಯಲ್ಲಿ ಸಂತೋಷ್ ಅವರನ್ನು ವಾರ್ತೆ ಅಂದ್ನೋ ವಾರ್ತೆ ಆಗೋಗಿದ್ದಾರೆ ಅವರು, ಈಗ ಅವರಿಗೆ ಜಾಮೀನು ಸಿಕ್ಕಿರೋದ್ರಿಂದ ಬಿಗ್ ಬಾಸ್ ಮನೆಗೆ ವಾಪಸ್ ಮರಳಿ ಬರ್ತಾರಾ, ಇಲ್ವಾ? ಬಂದ್ರೇನು, ಬರದ್ದಿದ್ರೇನು? ಬರೋದ್ದಿದ್ರೆ ಯಾವಾಗ? ಇದನ್ನು ಬಿಗ್ ಬಾಸ್ ನಿಮಗೆ ಮಾತಿನಲ್ಲಿ ತಲುಪಿಸುತ್ತಾರೆ. ಇದನ್ನು ನೋಡೋದಕ್ಕೆ ಕಾಯುತ್ತೀರಿ” ಎಂದು ಸುದೀಪ್ ಹೇಳಿದ್ದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಸುದೀಪ್ ಅವರು ಹೇಳಿ ಒಂದು ದಿನದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಇದೀಗ ವರ್ತೂರ್ ಸಂತೋಷ್ ದಿಢೀರ್ ಎಂಟ್ರಿ ಕೊಟ್ಟಿರುವುದು ಸ್ಪರ್ಧಿಗಳಲ್ಲಿ ಮಾತ್ರವಲ್ಲ ವೀಕ್ಷಕರಲ್ಲೂ ಭಾರೀ ಅಚ್ಚರಿ ಮೂಡಿಸಿದೆ.
ಬಿಗ್ಬಾಸ್ ಮನೆಯಲ್ಲಿ ಈಗ ವರ್ತೂರ್ ಸಂತೋಷ್! ಕೆಲದಿನಗಳ ಹಿಂದೆ ಅನಿರೀಕ್ಷಿತವಾಗಿ ಮನೆಯೊಳಗಿನಿಂದ ಎಕ್ಸಿಟ್ ಆಗಿದ್ದ ಸಂತೋಷ್ ಇದೀಗ ಮತ್ತೆ ಬಿಗ್ ಬಾಸ್ಗೆ ಸರ್ಪ್ರೈಸ್ ರೀತಿಯಲ್ಲಿ ಕೊಟ್ಟ ಎಂಟ್ರಿಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 800 ಕೋಟಿ ರೂ. ಈಕ್ವಿಟಿ ಷೇರು ಬಂಡವಾಳ ಹಂಚಿಕೆ, ಆದ್ಯತಾ ಆಧಾರದ ಮೇಲೆ ನೀಡಿಕೆ, ಕರ್ಣಾಟಕ ಬ್ಯಾಂಕ್ ನಿರ್ದೇಶಕರ ಮಂಡಳಿ ಸಭೆ
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.
BBKS10: ವರ್ತೂರು ಸಂತೋಷ್ ರೀ-ಎಂಟ್ರಿ?; ವೀಕ್ಷಕರಿಗೆ ನಟ ಸುದೀಪ್ ಹೇಳಿದ್ದಿಷ್ಟು