ಬೆಂಗಳೂರು: ಹುಲಿ ಉಗುರನ್ನು ಇಟ್ಟುಕೊಂಡಿದ್ದ ಕಾರಣಕ್ಕೆ ಬಿಗ್ಬಾಸ್ ರಿಯಾಲಿಟಿ ಶೋದಿಂದ ವರ್ತೂರು ಸಂತೋಷ್ ಹೊರಗೆ ಹೋಗಿದ್ದರು. ತದನಂತರ ಮತ್ತೆ ಮನೆಯೊಳಗೆ ಹಿಂತಿರುಗಿದರು. ಅದಾದ ಬಳಕವೂ ಹಲವು ಬಾರಿ ‘ನಾನು ಇಲ್ಲಿ ಇರಲಾರೆ. ಹೊರಗೆ ಹೋಗುತ್ತೇನೆ’ ಎಂದು ಅತ್ತೂಕರೆದಿದ್ದೂ ಇದೆ. ಯಾರ ಮಾತನ್ನೂ ಕೇಳದ ವರ್ತೂರು, ಕಡೆಗೆ ಅವರ ತಾಯಿ ಬಂದು ಸಮಾಧಾನ ಪಡಿಸಿದ ಮೇಲೆ ಮನೆಯಲ್ಲಿ ಉಳಿದು, ಆಟವಾಡಲು ಒಪ್ಪಿ ಮುಂದುವರಿದಿದ್ದರು.
ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ವಾಹನ ಸಂಚಾರ ಮಾರ್ಗ ಮಾರ್ಪಾಡು
ಆ ನಂತರ ಮನೆಯೊಳಗಿನ ಟಾಸ್ಕ್ಗಳಲ್ಲಿ ಭಾಗವಹಿಸುತ್ತ, ತಮ್ಮ ಅಭಿಪ್ರಾಯಗಳನ್ನು ಗಟ್ಟಿ ಧ್ವನಿಯಲ್ಲಿ ಮಂಡಿಸುತ್ತ ಬಂದಿರುವ ವರ್ತೂರ್ ಅವರಿಗೆ ಎಸ್ಕೇಪ್ ಆಗುವ ಚಾಳಿ ಮಾತ್ರ ಇನ್ನೂ ಬಿಟ್ಟಂತಿಲ್ಲ. ಹಾಗಾದ್ರೆ ಸಂತೋಷ್ ಎಸ್ಕೇಪ್ ಆಗಿದ್ದು ಎಲ್ಲಿಂದ? ಎಂಬ ಪ್ರಶ್ನೆ ಸದ್ಯ ವೀಕ್ಷಕರಲ್ಲಿ ಕಾಡುತ್ತಿದೆ.
ಈ ವಾರಾಂತ್ಯದಲ್ಲಿ ಉತ್ತಮ ಮತ್ತು ಕಳಪೆ ಮತಗಳಲ್ಲಿ ಅತಿ ಹೆಚ್ಚು ವೋಟ್ ಪಡೆದು ಸಂತೋಷ್, ಕಳಪೆ ಹಣೆಪಟ್ಟಿ ಸ್ವೀಕರಿಸಿದ್ದಾರೆ. ‘ಯಾರು ಏನೇ ಹೇಳಲಿ ನಾನು ಏನು ಎನ್ನುವುದು ನನಗೆ ಗೊತ್ತು’ ಎಂದು ಹೇಳಿಯೇ ಜೈಲುಡುಗೆ ತೊಟ್ಟು ಸೆರೆಮನೆಗೆ ಹೋಗಿದ್ದಾರೆ. ಆದ್ರೆ, ಜೈಲಿನೊಳಗೆ ಸುಮ್ಮನೆ ಕೂರದ ಸಂತೋಷ್ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನಡುರಾತ್ರಿ ಸೆರೆಯೊಳಗೆ ವರ್ತೂರ್ ಮಲಗಿದ್ದರೆ, ಹೊರಗೆ ತುಕಾಲಿ ಸಂತೋಷ್ ಮಾತಾಡುತ್ತ ಕೂತಿದ್ದರು. ಆಗ ಅಲ್ಲಿಂದ ಎಸ್ಕೇಪ್ ಆಗುವ ಆಲೋಚನೆಗೆ ಅಸ್ತು ಎಂದಿದ್ದಾರೆ.
ಇದನ್ನೂ ಓದಿ: ಸಂಪುಟ ಸಭೆಗೆ ಹೋಗದ ಡಿಕೆಶಿ ಅಭಿನಂದನಾರ್ಹರು – ಎಚ್ ಡಿಕೆ ವ್ಯಂಗ್ಯ
ವರ್ತೂರ್ಗೆ ತುಕಾಲಿ ಸಂತೋಷ್, ‘ಆಗಿದ್ದಾಗ್ಲಿ ಈಚೆಗೆ ಬಂದ್ಬಿಡು’ ಎಂದು ಕುಮ್ಮಕ್ಕು ಕೊಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿದ ವರ್ತೂರ್, ಕೂಡಲೇ ಜೈಲಿನ ಕಂಬಿಗಳ ನಡುವಿಂದ ನುಸುಳಿಕೊಂಡು ಆಚೆಗೆ ಬಂದಿದ್ದಾರೆ. ಮನೆಯವರೆಲ್ಲ ಮಲ್ಕೊಂಡಿದ್ದಾರಲ್ವಾ? ಎಂದು ಕೇಳುತ್ತಿದ್ದ ಹೊತ್ತಿನಲ್ಲೇ ಸೋಫಾದ ಮೇಲೆ ಮಲಗಿದ್ದ ಸಂಗೀತಾ ತಲೆಎತ್ತಿ ನೋಡಿದ್ದಾರೆ. ಬಿಗ್ಬಾಸ್ ಮನೆಯ ನಿಯಮವನ್ನು ಮುರಿದ ಸಂತೋಷ್ ಮಾಡಿದ್ದೇನು? ಅವರಿಗೆ ಏನಾಗಲಿದೆ? ವರ್ತೂರ್ ನೋಡಿದ ಸಂಗೀತಾ ಉಳಿದವರಿಗೂ ತಿಳಿಸುತ್ತಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ.