More

    VIDEO| BBKS10: ಬಿಗ್​ ಬಾಸ್​ ಮುಗಿದ ಬಳಿಕ ವರ್ತೂರು-ತನಿಷಾ ಮದುವೆ? ಪವಿ ಬಿಚ್ಚಿಟ್ರು ರೋಚಕ ಸಂಗತಿ!

    ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ 11ನೇ ವಾರದ ಅಂತ್ಯದತ್ತ ಸಾಗುತ್ತಿದ್ದು, 10ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಪವಿ ಪೂವಪ್ಪ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮನೆಯೊಳಗಿನ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಅತ್ಯಾಚಾರ ಮಾಡಿ ಚಿತ್ರೀಕರಣ: ಮಾಜಿ ಶಾಸಕ ಸೇರಿ 9 ಮಂದಿ ವಿರುದ್ಧ ಮಹಿಳೆ ದೂರು

    ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಜನರಲ್ಲಿ ಮೂಡಿರುವಂತ ಅಭಿಪ್ರಾಯಗಳು, ಬದಲಾವಣೆಗಳನ್ನು ತಿಳಿದುಕೊಂಡ ಪವಿ, ಈ ರೀತಿ ಮಾತನಾಡಿದ್ದಾರೆ. “ನೀರು ಎರಚುವ ಟಾಸ್ಕ್​ನಲ್ಲೇ ತನಿಷಾ ಅಷ್ಟೊಂದು ಕೋಪದಿಂದ ಆಡುತ್ತಿದ್ದರು. ನಾನು ಮನೆಯೊಳಗೆ ಕಾಲಿಟ್ಟ ತಕ್ಷಣ ತುಂಬ ಚೆನ್ನಾಗಿ ಮಾತನಾಡಿಸಿದರು. ಅದು ನನಗೆ ಡಬಲ್ ಫೇಸ್​ ಅನಿಸಿತು. ಅದು ನನಗೆ ಇಷ್ಟವಾಗಲಿಲ್ಲ” ಎಂದರು.

    “ಏಕೆ ಅಂದ್ರೆ ಮುಂದಿನ ವಾರದ ನಾಮಿನೇಷನ್​ಗೆ ಯಾರು ತನ್ನ ಹೆಸರನ್ನು ತೆಗದುಕೊಳ್ಳಬಾರದು ಎಂದು ಸ್ವೀಟ್…ಸ್ವೀಟ್ ಆಗಿ ಮಾತನಾಡುವುದು, ಟಾಸ್ಕ್​ನಲ್ಲಿ ಕಿರುಚುವುದು ಮಾಡುತ್ತಾರೆ. ಸುದೀಪ್ ಸರ್​ ಲೆಟರ್​ ಬರೆದು ಕಳುಹಿಸಿದಾಗ ಲೌಡ್​ ಅಂತ ಬರೆದು, ಸೌಂಡ್​ ಮಾಡಬೇಕು ಎಂದು ತಿಳಿಸಿದ್ದರು. ಆದಾದ ಮೇಲೆ ಅವರು ಅದನ್ನು ಯಾವ ರೀತಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ! ಅದನ್ನು ಹೇಳಿದ ಮೇಲಂತೂ ಹೆಚ್ಚು ಕಿರಾಚುಡುವುದೇ ಆಗಿದೆ” ಎಂದರು.

    ಇದನ್ನೂ ಓದಿ: BBKS10: ಅರ್ಧ ಶೇರ್​ಗೆ ಒಪ್ಪದ ತನಿಷಾ; ಲಕ್ಷುರಿಗಾಗಿ ಮನೆಯೊಳಗೆ ನಡೆದಿದ್ದು….?

    “ಮನೆಯೊಳಗೆ ಡ್ರಾಮಾ ಮಾಡುವುದು ತನಿಷಾ ಅನಿಸ್ತಾರೆ. ವರ್ತೂರು ಅವರ ಜತೆ ಇರುವುದು……..” ಮತ್ತಷ್ಟು ಸಂಗತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts