ಬಸವನಬಾಗೇವಾಡಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಅವರು ಭಾರತ ಕಂಡ ಅಪರೂಪದ ನಾಯಕರಾಗಿದ್ದಾರೆ ಎಂದು ಎಲ್ಐಸಿ ಆಡಳಿತಾಧಿಕಾರಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಪಟ್ಟಣದ ಭಾರತೀಯ ಜೀವ ವಿಮಾ ಕಚೇರಿಯಲ್ಲಿ ಹಮ್ಮಿಕೊಂಡ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀಜಿ ಜಯಂತಿ ನಿಮಿತ್ತ ಶುಕ್ರವಾರ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸೋಮು ಒಡೆಯರ, ಮಹೀಂದ್ರ ವಿಲ್ವನಾಥನ್ ಸುಬ್ರಮಣ್ಯಂ, ನೀಲಕಂಠ ಬಿಜಾಪೂರ, ಎಚ್.ಎಸ್. ಹಡಪದ, ಸಂತೋಷ ಕಟ್ಟಿ, ನಾಗಭೂಷಣ, ಬಿ.ಎಲ್. ಕೌಜಲಗಿ, ಕರೀಂ ಭಾಷಾ, ಮುದ್ದಂ ಶ್ರೀನಿವಾಸ, ಪ್ರಜ್ವಲ ಪಾಟೀಲ, ರಜಾಕ್ ಚೌಧರಿ, ಈರಯ್ಯ, ಯಲ್ಲಪ್ಪ, ಪರಸುರಾಮ ಮತ್ತಿತರರಿದ್ದರು.