ನವದೆಹಲಿ: ದೇಶಾದ್ಯಂತ 1 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೊನಾ ವೈರಸ್ ಸೋಂಕು ತಗುಲಿಸಿ, ಕೋವಿಡ್ 19 ಕೇಂದ್ರ ಬಿಂದು ಎನಿಸಿರುವ ನಿಜಾಮುದ್ದೀನ್ನ ಮರ್ಕಜ್ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಬೇಕು. ಹಾಗೂ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದು ಪರಿಷತ್ (ವಿಎಚ್ಪಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ನಿಜಾಮುದ್ದೀನ್ ಮರ್ಕಜ್ನಲ್ಲಿ ಧರ್ಮಗುರುಗಳ ಬೋಧನೆ ಕೇಳಿಸಿಕೊಂಡ ತಬ್ಲಿಘಿ ಜಮಾತ್ನ ಸದಸ್ಯರು ಕರೊನಾ ವೈರಸ್ ಸೋಂಕು ತಗುಲಿರುವ ಸಂಗತಿಯನ್ನು ಮುಚ್ಚಿಡುವುದು, ಚಿಕಿತ್ಸೆಗೆ ಕರೆದೊಯ್ದರೆ ಅಸಹಕರಿಸುವುದು, ಪುಂಡಾಟ, ಅಸಭ್ಯ ವರ್ತನೆ ತೋರುವುದನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಒಂದರ್ಥದಲ್ಲಿ ಸೋಂಕಿನ ಭಯೋತ್ಪಾದನೆಗೆ ಮುಂದಾಗುತ್ತಿದ್ದಾರೆ. ವಿಶ್ವದಲ್ಲೆಡೆ ಹಿಂಸಾಕೃತ್ಯಗಳನ್ನು ಎಸಗುತ್ತಿರುವ ಉಗ್ರ ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ತಬ್ಲಿಘಿ ಜಮಾತ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದೆ.
ನಿಜಾಮುದ್ದೀನ್ ಮರ್ಕಜ್ನ ಕಟ್ಟಡ ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಬೇಕು. ಹಾಗೂ ಅದರ ಆರ್ಥಿಕ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ವಿಎಚ್ಪಿ ಹೇಳಿದೆ.
ದೇಶಾದ್ಯಂತ ಲಾಕ್ಡೌನ್ ಘೋಷಿಸಿದ 8 ದಿನಗಳವರೆಗೆ ದೇಶದಲ್ಲಿ ಕರೊನಾ ಸೋಂಕಿತರ ಪ್ರಮಾಣ ಶೇ.2.8 ಏರಿಕೆಯಾಗುತ್ತಿತ್ತು. ಆದರೆ, ಮಾರ್ಚ್ 30ರಂದು ನಿಜಾಮುದ್ದೀನ್ ಮರ್ಕಜ್ನಲ್ಲಿ ಅನಿರೀಕ್ಷಿತವಾಗಿ ಸೋಂಕು ಸ್ಫೋಟಗೊಂಡಿತು ಎಂದು ವಿಎಚ್ಪಿಯ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಬೇಸರ ವ್ಯಕ್ತಪಡಿಸಿದ್ದಾರೆ.
ತಬ್ಲಿಘಿ ಜಮಾತ್ ಇಡೀ ದೇಶದ ಜನತೆಯ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಅದರ ಎಲ್ಲ ಕಚೇರಿಗಳು, ಬ್ಯಾಂಕ್ ಖಾತೆಗಳು, ಆರ್ಥಿಕ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇವರೆಷ್ಟು ಪ್ರಭಾವಿಗಳು…! ವಿಶೇಷ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಮಲೇಷ್ಯಾದ 8 ತಬ್ಲಿಘಿಗಳು