ಬೆಂಗಳೂರು: ಮೇಘನಾ ರಾಜ್ ಸರ್ಜಾ ಅಭಿನಯದ ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಘೋಷಣೆಯಾದಾಗ, ಮೇಘನಾ ಹೊರತುಪಡಿಸಿದರೆ, ಬೇರೆ ಯಾರೆಲ್ಲಾ ನಟಿಸಿದ್ದಾರೆ ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರತಂಡದವರು ಒಬ್ಬೊಬ್ಬ ನಟ-ನಟಿಯರ ಹೆಸರನ್ನ ಬಹಿರಂಗಗೊಳಿಸುತ್ತಿದ್ದಾರೆ.
ಲಾಜ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಬಿಡುಗಡೆ ಮಾಡಿದರು ‘ಕಬ್ಜ’ ಚಿತ್ರದ ಟ್ರೇಲರ್
ಪ್ರಮುಖವಾಗಿ ಬಾಲಾಜಿ ಮನೋಹರ್, ಮಹತಿ, ಅರವಿಂದ್ ಅಯ್ಯರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ತತ್ಸಮ ತದ್ಭವ’ ಚಿತ್ರವನ್ನು ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ನಿರ್ದಶನದ ಮೊದಲ ಚಿತ್ರ ಇದಾಗಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯವಾಗಿದೆ. ಸಿದ್ಧಾರ್ಥ್ ಎಂಬ ಪಾತ್ರದಲ್ಲಿ ಬಾಲಾಜಿ ಮನೋಹರ್ ನಟಿಸಿದರೆ, ನಿಧಿ ಮತ್ತು ಮ್ಯಾಥ್ಯೂ ಎಂಬ ಪಾತ್ರಗಳಲ್ಲಿ ಮಹತಿ ಮತ್ತು ಅರವಿಂದ್ ಅಯ್ಯರ್ ನಟಿಸಿದ್ದಾರೆ. ಚಿತ್ರತಂಡದವರು ಪಾತ್ರಧಾರಿಗಳ ಕುರಿತು ಬಿಟ್ಟುಕೊಟ್ಟಿದ್ದಾರಾದರೂ, ಯಾರು ಯಾವ ಪಾತ್ರ ಮಾಡಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ.
ಈ ಕುರಿತು ಮಾತನಾಡಿರುವ ಬಾಲಾಜಿ ಮನೋಹರ್, ‘ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಲು ಸಂತೋಷವಾಗುತ್ತಿದೆ. ತಮ್ಮ ಕಥೆಯನ್ನು ತೆರೆ ಮೇಲೆ ತರಲು ಇರಬೇಕಾದ ಧೈರ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಕಲೆ ಈ ಸಿನೆಮಾದ ಯುವ ನಿರ್ದೇಶಕರಿಗಿದೆ. ಒಟ್ಟಿನಲ್ಲಿ ಈ ಪಾತ್ರ ಸಂತಸ ತಂದಿದೆ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಮುರುಗದಾಸ್ ನಿರ್ಮಾಣದ ‘ಆಗಸ್ಟ್ 16, 1947’
‘ತತ್ಸಮ ತದ್ಭವ’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಈ ಚಿತ್ರಕ್ಕಿದೆ.
VIDEO| ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಡ್ಯಾನ್ಸ್ ಮಾಡಿದ ಅಕ್ಷಯ್ ಕುಮಾರ್!