More

    ‘ತತ್ಸಮ ತದ್ಭವ’ದಲ್ಲಿ ಬಾಲಾಜಿ, ಮಹತಿ, ಅರವಿಂದ್​ ಅಯ್ಯರ್​ …

    ಬೆಂಗಳೂರು: ಮೇಘನಾ ರಾಜ್ ಸರ್ಜಾ ಅಭಿನಯದ ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್​ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಘೋಷಣೆಯಾದಾಗ, ಮೇಘನಾ ಹೊರತುಪಡಿಸಿದರೆ, ಬೇರೆ ಯಾರೆಲ್ಲಾ ನಟಿಸಿದ್ದಾರೆ ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರತಂಡದವರು ಒಬ್ಬೊಬ್ಬ ನಟ-ನಟಿಯರ ಹೆಸರನ್ನ ಬಹಿರಂಗಗೊಳಿಸುತ್ತಿದ್ದಾರೆ.

    ಲಾಜ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಬಿಡುಗಡೆ ಮಾಡಿದರು ‘ಕಬ್ಜ’ ಚಿತ್ರದ ಟ್ರೇಲರ್​​

    ಪ್ರಮುಖವಾಗಿ ಬಾಲಾಜಿ ಮನೋಹರ್, ಮಹತಿ, ಅರವಿಂದ್ ಅಯ್ಯರ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    'ತತ್ಸಮ ತದ್ಭವ'ದಲ್ಲಿ ಬಾಲಾಜಿ, ಮಹತಿ, ಅರವಿಂದ್​ ಅಯ್ಯರ್​ …‘ತತ್ಸಮ ತದ್ಭವ’ ಚಿತ್ರವನ್ನು ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ನಿರ್ದಶನದ ಮೊದಲ ಚಿತ್ರ ಇದಾಗಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯವಾಗಿದೆ. ಸಿದ್ಧಾರ್ಥ್​ ಎಂಬ ಪಾತ್ರದಲ್ಲಿ ಬಾಲಾಜಿ ಮನೋಹರ್​ ನಟಿಸಿದರೆ, ನಿಧಿ ಮತ್ತು ಮ್ಯಾಥ್ಯೂ ಎಂಬ ಪಾತ್ರಗಳಲ್ಲಿ ಮಹತಿ ಮತ್ತು ಅರವಿಂದ್​ ಅಯ್ಯರ್​ ನಟಿಸಿದ್ದಾರೆ. ಚಿತ್ರತಂಡದವರು ಪಾತ್ರಧಾರಿಗಳ ಕುರಿತು ಬಿಟ್ಟುಕೊಟ್ಟಿದ್ದಾರಾದರೂ, ಯಾರು ಯಾವ ಪಾತ್ರ ಮಾಡಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ.

    ಈ ಕುರಿತು ಮಾತನಾಡಿರುವ ಬಾಲಾಜಿ ಮನೋಹರ್​, ‘ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಲು ಸಂತೋಷವಾಗುತ್ತಿದೆ. ತಮ್ಮ ಕಥೆಯನ್ನು ತೆರೆ ಮೇಲೆ ತರಲು ಇರಬೇಕಾದ ಧೈರ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಕಲೆ ಈ ಸಿನೆಮಾದ ಯುವ ನಿರ್ದೇಶಕರಿಗಿದೆ. ಒಟ್ಟಿನಲ್ಲಿ ಈ ಪಾತ್ರ ಸಂತಸ ತಂದಿದೆ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಮುರುಗದಾಸ್ ನಿರ್ಮಾಣದ ‘ಆಗಸ್ಟ್ 16, 1947’

    ‘ತತ್ಸಮ ತದ್ಭವ’ ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಈ ಚಿತ್ರಕ್ಕಿದೆ.

    VIDEO| ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಡ್ಯಾನ್ಸ್ ಮಾಡಿದ ಅಕ್ಷಯ್ ಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts