More

    ಬದುಕುವ ಛಲ ಹೊಂದಬೇಕು

    ಬಾಗಲಕೋಟೆ: ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಧೈರ್ಯದಿಂದ ಬದುಕುವ ಛಲ ಹೊಂದಿರಬೇಕು. ಮಕ್ಕಳು ತಮ್ಮ ಮನೆತನದ ಕೀರ್ತಿ ತರುವ ಹಾಗೆ ಬದುಕಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

    ನಗರದ ಬಿವಿವಿ ಸಂಘದ ಆಕ್ಕವಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಜೀವನದಲ್ಲಿ ಪ್ರಶಸ್ತಿ ಅಧಿಕಾರ ಬರುತ್ತದೆ ಎಂಬ ಆಸೆಯಿಂದ ಸಾಧನೆ ಮಾಡಲು ಹೋಗಬಾರದು. ನಿಸ್ವಾರ್ಥದಿಂದ ಕೆಲಸಮಾಡುತ್ತಾ ಹೋದಾಗ ಕಾಲ ಯಾವಗಲಾದರೂ ಗುರುತಿಸಿ ಗೌರವಿಸುತ್ತದೆ. ಶಾಲೆ ಕಲಿಯದಿದ್ದರೂ ಕಾಲೇಜು ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ನನ್ನ ಬದುಕು ಓದುವಂತಾಗಿದೆ. ಪ್ರತಿಯೋಬ್ಬ ಮನುಷ್ಯನನ್ನು ಮನುಷ್ಯರನ್ನಾಗಿ ಮಾನವೀಯತೆಯಿಂದ ಕಾಣಬೇಕು ಎಂದರು. ಮಂಗಳಮುಖಿಯರನ್ನು ತಿರಸ್ಕರಿಸದೆ ಅವರನ್ನು ಸಮಾನರೆಂದು ಪರಿಗಣಿಸಿ ಗೌರವಿಸಬೇಕು. ಸಂವಾದದಲ್ಲಿ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸಿದರು. ಡಾ.ವಿಜಯಕುಮಾರ ಕಟಗಿಹಳ್ಳಿಮಠ ಇತರರು ಇದ್ದರು.



    ಬದುಕುವ ಛಲ ಹೊಂದಬೇಕು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts