More

    ಶ್ರಮ ಜೀವಿಗಳನ್ನು ಗೌರವಿಸಿ

    ಬಾಗಲಕೋಟೆ: ಆಧುನಿಕತೆ ಜೀವನ ಯಾಂತ್ರಿಕತೆಗೆ ಹೆಚ್ಚು ಮೊರೆ ಹೋಗುತ್ತಿದೆ. ಇದರಿಂದ ಮಾನವ ಶ್ರಮದ ಮೌಲ್ಯ ಕ್ಷೀಣಿಸುತ್ತಿದೆ ಎಂದು ಬಾಗಲಕೋಟೆ ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಹೇಳಿದರು.

    ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ವಿವಿಧ ಕ್ಷೇತ್ರಗಳಲ್ಲಿ ಬದಲಾದ ಯಾಂತ್ರಿಕತೆಗಿಂತ ಮಾನವನ ಶ್ರಮ ಅಗತ್ಯವಾಗಿದೆ. ಕಾರ್ಮಿಕರನ್ನು ಗೌರವಿಸುವ ದೊಡ್ಡ ಗುಣ ನಮ್ಮಲ್ಲಿ ಸದಕಾಲ ಇರಬೇಕು. ಕಾಯಕದಲ್ಲಿ ಸಣ್ಣದು ದೊಡ್ಡದು ಅಂತಾ ಯಾವುದು ಇರುವುದಿಲ್ಲ. ಬುದ್ಧಿ ಜೀವಿಗಳಿಗಿಂತ ಶ್ರಮ ಜೀವಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು.

    ಸರ್ಕಾರ ಅಸಂಘಟಿಕ ಕಾರ್ಮಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಸೌಲಭ್ಯಗಳ ಮಾಹಿತಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಕಾರ್ಮಿಕರು ಸಂಘಟರಾಗುವ ಮೂಲಕ ಅಸಹಾಯಕರಿಗೆ ಸೌಲಭ್ಯಗಳ ಮಾಹಿತಿ ನೀಡಿ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.

    ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎ.ಜಿ. ತೋಟದ ಮಾತನಾಡಿ, ಸರ್ಕಾರ ಕಾರ್ಮಿಕರಿಗೆ ಅನೇಕ ಯೋಜನೆ, ಸೌಲಭ್ಯಗಳನ್ನು ನೀಡಿದೆ. ಕಾನೂನು ಬದ್ಧವಾಗಿ ನೆರವಿನ ಹಸ್ತ ಚಾಚಿದೆ. ಕಾರ್ಮಿಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯನ್ನು ಕಾಲಕಾಲಕ್ಕೆ ಭೇಟಿಯಾಗಿ ಸರ್ಕಾರದ ಯೋಜನೆ ಮಾಹಿತಿ ಪಡೆದು ಸೌಲಭ್ಯ ಪಡೆಯಬೇಕು ಎಂದರು.

    ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ, ಕಾರ್ಮಿಕ ನಿರೀಕ್ಷಕ ಅಶೋಕ ಒಡೆಯರ, ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಯೋಜನಾ ನಿರ್ದೇಶಕ ಸುಧಾರಕ ಬಡಿಗೇರ ಸೇರಿ ಇತರರು ಉಪಸ್ಥಿತರಿದ್ದರು.

    ಸರ್ಕಾರ ನೀಡುವ ಪ್ರತಿಯೊಂದು ಸೌಲಭ್ಯಗಳ ಬಗ್ಗೆ ಇಲಾಖೆ ವತಿಯಿಂದ ಅರಿವು ಮೂಡಿಸುವ ಕೆಲಸವಾಗಬೇಕು. ವಿವಿಧ ವಲಯದ ಕಾರ್ಮಿಕರಿಗೆ ಸಂಘಟನೆಯ ಕೊರತೆ ಇದೆ. ಕಾರ್ಮಿಕರು ತಾವು ಪಡೆಯುವ ಸೌಲಭ್ಯಗಳ ಬಗ್ಗೆ ಇತರರಿಗೆ ತಿಳಿಸುವ ಕಾರ್ಯವಾಗಬೇಕು.
    ಮಹಾದೇವ ಮುರುಗಿ, ಅಪರ ಜಿಲ್ಲಾಧಿಕಾರಿ

    ಶ್ರಮ ಸಮ್ಮಾನ ಪ್ರಶಸ್ತಿ ವಿತರಣೆ
    ಕಾರ್ಯಕ್ರಮದಲ್ಲಿ 13 ವರ್ಗಗಳ ಅಸಂಘಟಿತ ಕಾರ್ಮಿಕರಲ್ಲಿ ವಿಶೇಷ ಸಾಧನೆ ಮಾಡಿರುವ ಪ್ರತಿ ವರ್ಗಕ್ಕೆ 3 ರಂತೆ ಪ್ರಥಮ 15 ಸಾವಿರ ರೂ. ಮೌಲ್ಯದ ಚಿನ್ನದ ಪದಕ, ದ್ವಿತೀಯ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ ಹಾಗೂ ತೃತೀಯ 8 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ ಹಾಗೂ ಪ್ರಶಂಸನಾ ಪತ್ರ ನೀಡಲಾಯಿತು. ಅದೇ ರೀತಿ 13 ವರ್ಗಗಳಲ್ಲಿ ಮೂರು ಚಕ್ರ ವಾಹನ ಚಾಲಕ ವರ್ಗದಲ್ಲಿ 2, ಮಂಡಕ್ಕಿ ವರ್ಗದಲ್ಲಿ 3, ಚಿಂದಿ ಆಯುವವರ ವರ್ಗದಲ್ಲಿ 2 ಸೇರಿ ಉಳಿದ 10 ವರ್ಗದ ಅಸಂಘಟಿತ ಕಾರ್ಮಿಕರಿಗೆ ಪ್ರತಿ ವರ್ಗಕ್ಕೆ ತಲಾ 8 ರಂತೆ ಒಂದು ಸಾವಿರ ರೂ. ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಕ್ಷೌರಿಕ ವರ್ಗದಲ್ಲಿ ಸದಾಶಿವ ಕಟ್ಟಿಮನಿ (ಪ್ರಥಮ), ಸಂಗಪ್ಪ ಹಡಪದ (ದ್ವಿತೀಯ), ಅಶೋಕ ಹಳ್ಳಿ (ತೃತೀಯ), ಗೃಹ ಕಾರ್ಮಿಕ ವರ್ಗದಲ್ಲಿ ಕಸ್ತೂರಿಬಾಯಿ ಆದಾಪುರ (ಪ್ರಥಮ), ಜಾಹಿದಾ ತಾಂಬೋಳಿ (ದ್ವಿತೀಯ), ನಾಗವ್ವ ಬಾಗಿ (ತೃತೀಯ), ಟೇಲರ್ ವರ್ಗದಲ್ಲಿ ಪಂಚಾಕ್ಷರಿ ಕುಂಬಾರ (ಪ್ರಥಮ), ಕೃಷ್ಣ ಟೊಣಪೆ (ದ್ವಿತೀಯ), ಅನ್ವರ ಬೀಳಗಿ (ತೃತೀಯ), ಮೆಕಾನಿಕ್ ವರ್ಗದಲ್ಲಿ ಬಸವರಾಜ ಜೀರಗಾಳ (ಪ್ರಥಮ), ನೂರಮಹಮ್ಮದ್ ಸಿದ್ದಾಪುರ (ದ್ವಿತೀಯ), ಸಾಯಿನಾಥ ಸಾಲಮಂಟಪಿ (ತೃತೀಯ), ಪತ್ತಾರಿಕೆ ವರ್ಗದ ಕಿರಣ ಚೊಳಚಗುಡ್ಡ (ಪ್ರಥಮ), ಮಳಿಯಪ್ಪ ಪತ್ತಾರ (ದ್ವಿತೀಯ), ವೆಂಕಟೇಶ ಟಂಕಸಾಲಿ (ತೃತೀಯ), ಕುಂಬಾರಿಕೆ ವರ್ಗದಲ್ಲಿ ಲಕ್ಷ್ಮಣ ಕುಂಬಾರ (ಪ್ರಥಮ), ಅನುಸೂಯಾ ಹಳ್ಳಿಮನಿ (ದ್ವಿತೀಯ), ಪರಶುರಾಮ ಕುಂಬಾರ (ತೃತೀಯ).

    ಮೂರು ಚಕ್ರ ವಾಹನ ವರ್ಗದಲ್ಲಿ ಅಬ್ದುಲ್‌ಸಾಬ ಮುಲ್ಲಾ (ಪ್ರಥಮ), ಚಂದ್ರಶೇಖರ ಬೆಣ್ಣಿಹಾಳ (ದ್ವಿತೀಯ), ಹನುಮಂತಪ್ಪ ಚುಕ್ಕಾಡಿ (ತೃತೀಯ), ನಾಲ್ಕು ಚಕ್ರ ವಾಹನ ವರ್ಗದಲ್ಲಿ ಸಂಜು ಅಣ್ಣಾಸಾಬ ಸಿತೋಳೆ (ಪ್ರಥಮ), ಮೋಹನ ಚಿಂಚಖಂಡಿ (ದ್ವಿತೀಯ), ಕಾಶಿನಾಥ ಗೋವಿಂದಪುರಠ (ತೃತೀಯ), ಅಗಸರ (ಧೋಬಿ) ವರ್ಗದಲ್ಲಿ ಬಸವರಾಜ ಪರೀಟ (ಪ್ರಥಮ), ಯಮನಪ್ಪ ಅಗಸರ (ದ್ವಿತೀಯ), ವೆಂಕಟೇಶ ಹಣಮಂತ ಪರೀಟ (ತೃತೀಯ), ಮಂಡಕ್ಕಿ ವರ್ಗದಲ್ಲಿ ಗದ್ದೆಪ್ಪ ತಪ್ಪಲದಡ್ಡಿ (ಪ್ರಥಮ), ನೀಲಮ್ಮ ತಪ್ಪಲದಡ್ಡಿ(ದ್ವಿತೀಯ), ಕೊಂಡಾರೆಡ್ಡಿ ಗಜ್ಜಲ (ತೃತೀಯ), ಹಮಾಲರ ವರ್ಗದಲ್ಲಿ ಮೈನೂದ್ದೀನ್ ಮುಜಾವರ (ಪ್ರಥಮ), ಸಗರೆಪ್ಪ ಡೊಳ್ಳಿನ (ದ್ವಿತೀಯ), ಜಂಟಿಂಗಪ್ಪ ಚಿಗರಿ (ತೃತೀಯ) ಹಾಗೂ ಚಿಂದಿ ಆಯುವವರ ವರ್ಗದಲ್ಲಿ ಹುಸೇನ ಕೊರವರ (ಪ್ರಥಮ), ರಾಮಪ್ಪ ಕೊರವರ (ದ್ವಿತೀಯ), ದುರ್ಗಪ್ಪ ಕೋರವಾರ (ತೃತೀಯ) ಸ್ಥಾನ ಪಡೆದಿದ್ದು, ಇವರೆಲ್ಲರಿಗೂ ಗೌರವಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts