More

    ಬಾಬಾ ಶಾವಲಿ ಉರೂಸ್ ನೇರ್ಚೆಗೆ ಚಾಲನೆ

    ಸಿದ್ದಾಪುರ: ಸರ್ವಧರ್ಮ ಸಂಕೇತದ ನಂಬಿಕೆಗೆ ಹೆಸರುವಾಸಿಯಾಗಿರುವ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆಗೆ ಶುಕ್ರವಾರ ಚಾಲನೆ ದೊರಕಿತು.

    ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಸರ್ವಧರ್ಮಿಯರು ಭಾಗವಹಿಸಿ ಪ್ರಾರ್ಥಿಸಿದರು.
    ಫೆ 12ರವರೆಗೆ ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಕೊನೆಯ ದಿನ ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಧಾರ್ಮಿಕ ಪಂಡಿತರು, ಜನಪ್ರತಿನಿಧಿಗಳು, ಸಮಾಜ ಸೇವಕರು, ಗಣ್ಯರು ಭಾಗವಹಿಸಲಿದ್ದಾರೆ.

    ಮಸೀದಿಯ ಖತಿಬ್ ಅಲಿ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಪಂಡಿತ ಸಯ್ಯದ್ ಮಹಮ್ಮದ್ ಸಮಿಹ್ ತಂಗಳ್ ಕೊಂಬೋಳ್ ಪಟ್ಟಣ್ ಬಾಬಾ ಸಾವಲಿ ದರ್ಗಾ ಬಾಗಿಲು ತೆರೆದು ವಿಶೇಷ ಪ್ರಾರ್ಥನೆಯೊಂದಿಗೆ ದುಆ ನೇತೃತ್ವ ವಹಿಸಿದ್ದರು.

    ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಎಂ. ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನಾ, ಖಜಾಂಚಿ
    ಟಿ.ಕೆ. ಮುಸ್ತಫಾ, ಮಾಜಿ ಅಧ್ಯಕ್ಷ ಸಿ.ಕೆ. ಮೊಯಿದು ಹಾಜಿ, ಸಿ.ಎಂ. ಅಬ್ದುಲ್ ಜಬ್ಬಾರ್ ಹಾಜಿ, ಕೆ.ಎಚ್. ಅಬೂಬಕ್ಕರ್, ಡಿ.ಎ. ಹಾರಿಸ್ ಹಾಜಿ, ಮಾಜಿ ಉಪಾಧ್ಯಕ್ಷ ಸಿ.ಎಚ್. ಖಾದರ್, ತಾರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ. ಅಲಿ ಹಾಜಿ, ಗ್ರಾಮ ಪಂಚಾಯಿತಿ ಸದಸ್ಯ ನಾಸರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts